ಮಂಗಳೂರು, ಮೇ.19 (DaijiworldNews/PY): ಕರ್ನಾಟಕದ ದಕ್ಷಿಣ ಕರಾವಳಿಯಲ್ಲಿ ಅಪಾಯಕ್ಕೆ ಸಿಲುಕಿದ ಕೇರಳದ ಕಣ್ಣೂರಿನ 3 ಮೀನುಗಾರರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.
"ಕೋಸ್ಟ್ ಗಾರ್ಡ್ ತಂಡ ವಿಕ್ರಮ್ ನೌಕೆ ಮೂಲ ಕಾರ್ಯಚರಣೆ ನಡೆಸಿ ಕೇರಳದ ಮೂವರು ಮೀನುಗಾರರಾದ ಅರುಣ್ (36), ಎಸ್ ಫ್ರಾನ್ಸಿಸ್ (58), ಮತ್ತು ಸುರೇಂದರ್ (64) ಅವರನ್ನು ರಕ್ಷಿಸಿದ್ದಾರೆ. ಕೇರಳದ ಕಣ್ಣೂರಿನಿಂದ 10 ನಾಟಿಕಲ್ ದೂರದಲ್ಲಿ ಮೀನುಗಾರಿಕಾ ದೋಣಿಯೊಂದು ಕೆಟ್ಟುನಿಂತಿತ್ತು" ಎಂದು ಭಾರತೀಯ ಕೋಸ್ಟ್ ಗಾರ್ಡ್ನ ಪ್ರಕಟಣೆ ತಿಳಿಸಿದೆ.
ಮೇ 14ರ ಶುಕ್ರವಾರ ಮಧ್ಯರಾತ್ರಿ ಕೋಸ್ಟ್ ಗಾರ್ಡ್ ತಂಡ ವಿಕ್ರಮ್ ನೌಕೆಯ ಮೂಲಕ ಕಾರ್ಯಾಚರಣೆ ಆರಂಭಿಸಿದ್ದು, ಮೂವರು ಮೀನುಗಾರರನ್ನು ರಕ್ಷಿಸಿದ್ದಾರೆ.
"ಮೀನುಗಾರರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು, ಮೀನುಗಾರರು ಆರೋಗ್ಯವಾಗಿದ್ದಾರೆ. ಮೀನುಗಾರರನ್ನು ಸಂಸದ ನಳಿನ್ ಕುಮಾರ್ ಕಟಿಲ್ ಅವರ ಸಮ್ಮುಖದಲ್ಲಿ ಕೇರಳ ಸರ್ಕಾರದ ಪ್ರತಿನಿಧಿಗಳಿಗೆ ಹಸ್ತಾಂರಿಸಲಾಗಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.