ಮಂಗಳೂರು, ಮೇ 19 (DaijiworldNews/MS): ರೈತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ವೇಳೆ ಏಕಾಏಕಿ ಭುಗಿಲೆದ್ದ “ಟೂಲ್ಕಿಟ್’ ವಿವಾದ ಇದೀಗ ಕೈ - ಕಮಲದ ಆರೋಪ ಪ್ರತ್ಯಾರೋಪಕಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕೊರೊನಾ ಸಂಕಷ್ಟದ ಪರಿಸ್ಥಿತಿಯನ್ನು ಪ್ರಧಾನಿ ಮೋದಿಯ ವರ್ಚಸ್ಸಿಗೆ ಮಸಿ ಬಳಿಯಲು ಬಳಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಅಂತಹ ಟೂಲ್ಕಿಟ್ ಇಲ್ಲ. ಅದು ಕೇವಲ ಬಿಜೆಪಿಯ ಕಪೋಲಕಲ್ಪಿತ ಪ್ರಚಾರ ಎಂದಿದೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ನಳಿನ್ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದ್ದು , "ಕಾಂಗ್ರೆಸ್ ಪಕ್ಷದ ವಿಷದ ಪೊರೆ ಒಂದೊಂದಾಗಿ ಕಳಚುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ತಂದೆವು ಎನ್ನುವವರ ದೇಶದ್ರೋಹಿ ಮನಸ್ಥಿತಿ ‘ಟೂಲ್ ಕಿಟ್’ ನಲ್ಲಿ ಬಹಿರಂಗ. ಇಡೀ ದೇಶ ಕೊರೋನಾ ಸಂಕಷ್ಟದಲ್ಲಿರುವಾಗ ದೇಶದ ಘನತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಹಾಳುಮಾಡುತ್ತಿದೆ "ಎಂದು ಆರೋಪಿಸಿದ್ದಾರೆ.
" ಕಾಂಗ್ರೆಸ್ ಪಕ್ಷದ ದೇಶವಿರೋಧಿ “ಟೂಲ್ ಕಿಟ್” ಮೂಲಕ ಜನರ ಕೋವಿಡ್ ಸಂಕಷ್ಟದ ಪರಿಸ್ಥಿತಿಯನ್ನು ಬಳಸಿಕೊಂಡು ಬಿಜೆಪಿ ವಿರೋಧಿ ಅಲೆ ಸೃಷ್ಟಿಸುವುದು.ಕೋವಿಡ್ ಸೋಂಕಿನಿಂದ ಮೃತರಾದವರ ಶವಸಂಸ್ಕಾರ ಸನ್ನಿವೇಶಗಳನ್ನು ಚಿತ್ರಿಕರಿಸಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಭಿತ್ತರಿಸಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವುದಾಗಿದೆ. ಕಾಂಗ್ರೆಸ್ ಟೂಲ್ ಕಿಟ್ ಟಿವಿ ಮಾಧ್ಯಮಗಳಲ್ಲಿ 24/7 ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳುಸುದ್ದಿ ಪ್ರಸಾರ ಸ್ಥಳೀಯ ಕೃಪಾಪೋಷಿತ ಚಿಂತಕರು, ಬುದ್ಧಿಜೀವಿಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ಹೇಳಿಕೆ ನೀಡುವುದಾಗಿದೆ" ಎಂದು ಆರೋಪಿಸಿದ್ದಾರೆ.
" ಚೀನಾ ವೈರಸ್ಸಿನ ಬದಲು ಇಂಡಿಯನ್ ವೆರಿಯಂಟ್ ಎನ್ನುವ ಪದ ಬಳಕೆ, ಹಿಂದೆ ಮೋದಿಯವರ ಅಭಿಮಾನಿ ಎಂದು ಹೇಳಿಕೊಂಡು ಅವರಿಂದ ಹೆಚ್ಚು ಹೆಚ್ಚು ಮೋದಿಯವರ ವಿರುದ್ಧ ಹೇಳಿಕೆ ಕೊಡಿಸಿ, ಜನರನ್ನು ನಂಬಿಸುವುದು. ಇವೆಲ್ಲವೂ ಕಾಂಗ್ರೆಸ್ ಪಕ್ಷದ ದೇಶವಿರೋಧಿ “ಟೂಲ್ ಕಿಟ್” ನ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.