ಕೋಟ, ಮೇ 19 (DaijiworldNews/MS): ಐತಿಹಾಸಿಕ ಹಿನ್ನಲೆಯುಳ್ಳ ಪುರಾಣಪ್ರಸಿದ್ಧಿ ಪಡೆದಿರುವ ಕೋಟದ ವರುಣತೀರ್ಥ ಕೆರೆಗೆ ಕಾಯಕಲ್ಪ ನೀಡಲು ರಾಜ್ಯ ಸರಕಾರ ಮುಂದಾಗಿದೆ.
ಕೆರೆ ನವೀಕರಣಕ್ಕೆ ಅಂದಾಜು ಸಣ್ಣನೀರಾವರಿ ಇಲಾಖೆ ಮೂಲಕ ಯೋಜನೆ ಸಿದ್ಧಪಡಿಸಿ 10ಕೋಟಿ ರೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನೇತ್ರತ್ವದಲ್ಲಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅದರಂತೆ ಹಿಂದೂ ಧರ್ಮದಾಯದತ್ತಿ ಸಚಿವಾಲಯದಿಂದ 1ಕೋಟಿ ರೂ ಈಗಾಲೇ ಬಿಡುಗಡೆಗೊಳಿಸಿದ್ದು ಅದರಂತೆ ಸೋಮವಾರ ವೇದಮೂರ್ತಿ ಮಧುಸೂದನ್ ಬಾಯಿರಿ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಕೋಟ ಅಮೃತೇಶ್ವರಿ ದೇವಳದ ಅಧ್ಯಕ್ಷ ಆನಂದ್ ಸಿ ಕುಂದರ್ ಶಿಲಾನ್ಯಾಸಗೈದರು.ಈ ಸಂದರ್ಭದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿ ಸದಸ್ಯ ಕೆ.ಅನಂತಪದ್ಮನಾಭ ಐತಾಳ್, ಕೋಟ ಅಮೃತೇಶ್ವರಿ ದೆವಳದ ಅರ್ಚಕ ರಮಾನಾಥ ಜೋಗಿ,ಪ್ರಥಮದರ್ಜೆ ಗುತ್ತಿಗೆದಾರ ಸುನೀಲ್ ಆರ್ ಪೂಜಾರಿ ಬೆಳಗಾವಿ ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್,ಉಪಾಧ್ಯಕ್ಷ ವಾಸುವಪೂಜಾರಿ,ಕೋಟ ಗ್ರಾಮಪಂಚಾಯತ್ ಸದಸ್ಯರಾದ ಸಂತೋಷ್ ಪ್ರಭು,ಚಂದ್ರ ಪೂಜಾರಿ,ಚಂದ್ರ ಆಚಾರ್ಯ,ಪಾಂಡು ಪೂಜಾರಿ,ಉದ್ಯಮಿ ವೆಂಕಟೇಶ ಪ್ರಭು,ಉಮೇಶ್ ಪ್ರಭು,ರಮೇಶ್ ಪ್ರಭು,ಮತ್ತಿತರರು ಉಪಸ್ಥಿತರಿದ್ದರು.
ವಾರಾಹಿ ಯೋಜನೆ ಪರಿಕಲ್ಪನೆ
ರಾಜ್ಯ ಸರಕಾರದ ವಾರಾಹಿ ಯೋಜನೆಯನ್ನು ಸಮರ್ಕವಾಗಿ ಅನುಷ್ಠಾನಗೊಳಿಸಿ ಪ್ರಸ್ತುತ ಬೇಳೂರು ಗ್ರಾಮಪಂಚಾಯತ್ ವ್ಯಾಪ್ತಿಯವರೆಗೆ ಜೋಡಿಸಿಕೊಂಡಿರುವ ವಾರಾಹಿ ನೀರನ್ನು ಬೇಸಿಗೆಯಲ್ಲಿ ಸದ್ಭಳಕೆ ಮಾಡಿಕೊಳ್ಳುವ ದಿಸೆಯಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಗಳ ವ್ಯಾಪ್ತಿ ಹೊಂದಿಕೊಂಡಿರುವ ವರುಣತೀರ್ಥ ಕೆರೆಗೆ ಜೋಡಣೆ ಮಾಡುವ ಯೋಜನೆ ಸಿದ್ಧಪಡಿಸಿಕೊಂಡು ಸಣ್ಣ ನೀರಾವರಿ ಯೋಜನೆಯ ಮೂಲಕ ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ.
ಪುರಾಣ ಹಿನ್ನಲೆ
ವರುಣತೀರ್ಥ ಕೆರೆ ಐತಿಹಾಸಿಕ ಹಿನ್ನೆಲೆಯ ಜೊತೆ ಪುರಾಣ ಪ್ರಸಿದ್ಧಿಗೆ ಮಹತ್ವಪಡೆದುಕೊಂಡಿದೆ.ಖರಾಸುರ ದಂಪತಿಗಳಿಂದ ಪ್ರತಿಷ್ಠಾಪಿತ ಗೊಂಡಿರುವ ಕೋಟ ಅಮೃತೇಶ್ವರಿ ಹಲವು ತಾಯಿ ಮಕ್ಕಳ ದೇವಳ ಹಾಗೂ ಕೋಟ ಪೇಟೆ ದೇವರೆಂದೆ ಪ್ರಖ್ಯಾತಿ ಪಡೆದಿರುವ ವರುಣತೀರ್ಥ ರಾಜಶೇಖರ ದೇವಳ,ರಾಷ್ಟ್ರೀಯ ಹೆದ್ದಾರಿ ತಾಗಿಕೊಂಡಿರುವ ಕೋಟದ ಮಹತೋಭಾರ ಮಹಾಲಿಂಗೇಶ್ವರ ದೇವಳಕ್ಕೆ ಧಾರ್ಮಿಕ ಹಿನ್ನಲ್ಲೆಗೆ ಮುನ್ನುಡಿ ಬರೆದಿದೆ.
ಕೋಟ ಅಮೃತೇಶ್ಚರಿ ದೇವಿಗೆ ಇಲ್ಲಿನ ನೀರಿನ ಅಭಿಷೇಕ,ರಾಜಶೇಖರ ದೇವಳಕ್ಕೆ ಸನಿಹತೆ ,ಕೋಟ ಮಹತೋಭಾರ ಹಿರೇಮಹಾಲಿಂಗೇಶ್ವರ ದೇವಳದ ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಅವಭ್ರತ ಸ್ನಾನ ಇದೇ ಕರೆಯಲ್ಲಿ ನಡೆಯುತ್ತದೆ.ಅದೇ ರೀತಿ ಈ ಕೆರೆಯ ಸನಿಹದಲ್ಲಿರುವ ಸೋಮೇಶ್ಚರ ದೇವಳದ ದ್ವಾರ(ದೇವರ ಕಡು)ದ ಸಮೀಪ ಒರ್ವ ಗುರು ತಪಸ್ಸಿಗೆ ಕುಳಿತನೆಂಬ ಇತಿಹಾಸವಿದೆ ಅದರಂತೆ ಆ ಕರೆಗೆ ಇನ್ನೊಂದು ಹೆಸರು ಗುರುವಿನ ಕೆರೆ ಎಂದು ಸ್ಥಳೀಯರು ಉಲ್ಲೇಖಿಸುತ್ತಾರೆ.
ನೂರಾರು ಎಕ್ಕರೆ ಕೃಷಿಭೂಮಿಗೆ ನೀರುಣಿಸುವ ಕೆರೆ
ಈ ಕೆರೆಯಿಂದ ಹಲವು ಉಪಯೋಗಗಳು ಇದೆ ಅದರಲ್ಲಿ ಧಾರ್ಮಿಕವಾಗಿ ಹಿನ್ನಲ್ಲೆ ಇದ್ದರೂ ದೈನಂದಿನ ಕಾರ್ಯಕ್ಕೂ ಮಹತ್ತರವಾದ ಸ್ಥಾನ ಈ ಕೆರೆ ನೀಡಿದೆ ಅದರಲ್ಲಿ ಕೃಷಿಕನಿಗೆ ನೀರುಣಿಸುವ ಕಾರ್ಯ ಕರೆ ಮಾಡುತ್ತಿದೆ ಪ್ರತಿ ವರ್ಷ ಭತ್ತದ ಬಿತ್ತನೆ ಕಾರ್ಯಕ್ಕೆ ಎಕ್ಕರ ಗಟ್ಟಲೆ ಭೂಮಿಗೆ ಆಸರೆಯಾಗಿದೆ.ಅಲ್ಲದೆ ಕೋಟ ಹಾಗೂ ಕೋಟತಟ್ಟು ಗ್ರಾಮದ ಅಂರ್ತಜಲ ವೃದ್ಧಿಗೆ ಪೂರಕ ಕೆರೆ ಕೂಡಾ ಹೌದು.
ಕೆರೆ ವಿನ್ಯಾಸ ಹೇಗೆ
ಕಳೆದೆರಡು ಬಾರಿ ಕೆರೆ ಅಭಿವೃದ್ಧಿ ನಡೆದಿದೆ ಆದರೆ ಸಮರ್ಪಕ ಅನುದಾನದ ಕೊರತೆ ಕಾಮಗಾರಿಯಲ್ಲಿ ಕೊಂಚ ಹಿನ್ನಡೆ ಕಂಡಿತು ಆದರೆ ಈ ಬಾರಿಯ ಕೆರೆ ಅಭಿವೃದ್ಧಿಗೊಂಡರೆ ಅದರಲ್ಲಿ ವಾಕಿಂಗ್ ಟ್ರ್ಯಾಕ್,ಕುಳಿತುಕೊಳ್ಳುವ ಆಸನದ ವ್ಯವಸ್ಥೆ,ಕೆರೆಯ ಸುತ್ತಲು ಆರ್ಯುವೇದಿಕ್ ಗಿಡ ಮರಗಳ ವ್ಯವಸ್ಥೆ,ವಿನ್ಯಾಸದ ಮೆಟ್ಟಿಲು,ಕೆರೆಯ ಮಧ್ಯ ಭಾಗ ಇರುವ ಲಿಂಗಕ್ಕೆ ಸಾನಿಧ್ಯ ಒದಗಿಸುವುದು,ಸುತ್ತಲು ದೀಪಾಲಂಕಾರದ ವ್ಯವಸ್ಥೆ ಹೀಗೆ ನಾನಾರೀತಿಯ ವಿನ್ಯಾಸಗಳು ಈ ಕೆರೆಯಲ್ಲಿ ಕಾಣಬಹುದಾಗಿದೆ.
"ಕೆರೆ ಅಭಿವೃದ್ಧಿ ಕುರಿತಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕನಸಿನ ರೂಪುರೇಖೆ ಸಿದ್ದಪಡಿಸಿ ಸರಕಾರಕ್ಕೆ 10 ಕೋಟಿ ರೂಗಳ ಪ್ರಸ್ತಾವನೆ ಸಲ್ಲಿಸಿ ಅದು ಈಗಾಗಲೇ ಮಂಜುರಾತಿಗೆ ಸಿದ್ಧಗೊಂಡಿದೆ.ನಮ್ಮೆಲ್ಲರ ಕನಸು ಕೂಡಾ ಈ ಗ್ರಾಮದ ಅಂತರ್ಜಲದ ಪ್ರತಿರೂಪವಾಗಿರುವ ಕೆರೆ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಠಿಯಾಗಿದೆ" -ಆನಂದ್ ಸಿ ಕುಂದರ್ ವರುಣತೀರ್ಥ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರು
ಕೋವಿಡ್ 19 ಸಾಂಕ್ರಾಮಿಕ 2ನೇ ಅಲೆಯ ತೀವ್ರತೆಯಿಂದಾಗಿ ಹೆಚ್ಚುತ್ತಿರುವಂತ ಸೋಂಕಿತರ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಮೇ.24ರವರೆಗೆ ವಾಣಿಜ್ಯ ಮತ್ತು ಇತರೆ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸೋದು ಅನಿವಾರ್ಯವಾಗಿತ್ತು. ಈ ನಿರ್ಬಂಧದ ನಡುವೆಯು ಕೆಲವು ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.