ಉಡುಪಿ, ಮೇ.18 (DaijiworldNews/HR): ಬಾರ್ಕೂರಿನ ಸರ್ಕಾರಿ ಹಾಸ್ಟೆಲ್ನಲ್ಲಿ ಸಿಲುಕಿರುವ ಬಂಗಾಳದ 13 ಪದವಿಪೂರ್ವ ವಿದ್ಯಾರ್ಥಿಗಳು ತಮಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ನೀಡುವಂತೆ ಸಹಾಯ ಕೋರಿದ್ದು, ಇದಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಜಿ ಜಗದೀಶ ಮತ್ತು ಶಾಸಕ ರಘುಪತಿ ಭಟ್ ಅವರು ವಿದ್ಯಾರ್ಥಿಗಳಿಗೆ ಸಾಹಾಯ ಮಾಡಿದ್ದಾರೆ.
ಬಂಗಾಳದ ಚಹಾ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಕುಟುಂಬಗಳ 13 ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಸಿಲುಕಿಕೊಂಡಿದ್ದು, ಅವರಲ್ಲಿ 7 ಮಂದಿಗೆ ಕೊರೊನಾ ಪಾಸಿಟಿವ್, ಮೂವರಿಗೆ ನೆಗೆಟಿವ್ ಮತ್ತು ಇಬ್ಬರು ಆರ್ಟಿ-ಪಿಸಿಆರ್ಗೆ ಒಳಗಾಗಲಿಲ್ಲ ಹಾಗಾಗಿ ತಕ್ಷಣ ವೈದ್ಯಕೀಯ ತಂಡ ಕೂಡ ಸ್ಥಳಕ್ಕೆ ಆಗಮಿಸಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕಾದವರ ಮಾದರಿಗಳನ್ನು ಸಂಗ್ರಹಿಸಿದೆ.
ವಿದ್ಯಾರ್ಥಿಗಳಿಗೆ ಆಹಾರ, ಔಷಧಿ ಮತ್ತು ಆಕ್ಸಿಮೀಟರ್ ಇರಲಿಲ್ಲ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರುಕ್ಮಿಣಿ ಅವರು ಕೂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮುಂದಾದರು.
ಇನ್ನು ಡಿಸಿ ಜಿ ಜಗದೀಶ ಮತ್ತು ಶಾಸಕ ರಘುಪತಿ ಭಟ್ ನೀಡಿದ ಸೂಚನೆಯ ಮೇರೆಗೆ ಅರುಣ್ ಕಾಂಚನ್ ಮತ್ತು ನಮ್ಮೂರು ಬಾರ್ಕೂರು ಸಾಮಾಜಿಕ ಜಾಲತಾಣ ಪೇಜ್ ನ ಸ್ನೇಹಿತರು ಹಾಗೂ ಬಾರ್ಕೂರಿನ ಕೆಲವು ಸ್ಥಳೀಯರು ಆಹಾರ, ದಿನಸಿ ಮತ್ತು ಅಗತ್ಯವಾದ ಔಷಧಿಗಳನ್ನು ಪಡೆಯುವುದಕ್ಕೆ ಸಹಾಯ ಮಾಡಿದ್ದಾರೆ.
ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ ಅವರು ಆಹಾರ, ತರಕಾರಿಗಳು ಮತ್ತು ಗ್ಯಾಸ್ ಸಿಲಿಂಡರ್ ಒದಗಿಸಿದರು.
ಪಲ್ಲವಿ ಅವರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದ್ದು, ಅವರಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಹೇಳಿದರು.