ಬಂಟ್ವಾಳ: ಮೇ.18 (DaijiworldNews/HR): ಬರಿಮಾರು ಗ್ರಾಮ ಪಂಚಾಯತ್ ಸದಸ್ಯ ಹರಿಕೃಷ್ಣ ಬಿ.ಎಸ್ ಅವರು ತನ್ನ ವಾರ್ಡ್ನಲ್ಲಿರುವ ಬಡ ಕುಟುಂಬದ ಕಷ್ಟಗಳಿಗೆ ಸ್ಪಂದಿಸಲು ಮುಂದೆ ಬಂದಿದ್ದು, ಅವರ ನೇತೃತ್ವದಲ್ಲಿ 60 ಮನೆಗಳಿಗೆ ಇಂದು ಆಹಾರ ಕಿಟ್ ವಿತರಿಸಲಾಯಿತು.
ಕಳೆದ ವರ್ಷದ ಕೊರೊನಾ ಸಮಯದಲ್ಲಿ ಕೂಡ ಬರಿಮಾರು ಗ್ರಾಮದಲ್ಲಿ ಹರಿಕೃಷ್ಣ ಬಿ.ಎಸ್ ಹಾಗೂ ತಂಡದಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿತ್ತು.
ಕಿಟ್ ವಿತರಣೆ ವೇಳೆ ಪಂಚಾಯತ್ ಸದಸ್ಯ ಕೋಟಿ ಬಂಗೇರ ಹಾಗೂ ಮಧು ಪೂಜಾರಿ ಗಾನದಪಾಲು, ಗುರು ಪ್ರಸಾದ್ ಬುಳಿಬೈಲು ಬೆಟ್ಟು, ನವೀನ್ ಪುಜಾರಿ ಮಿತ್ತಬೈಲ್ಯ ಉಪಸ್ಥಿತರಿದ್ದರು.