ಮಂಗಳೂರು, ಮೇ.18 (DaijiworldNews/PY): ಲಾಕ್ಡೌನ್ ಹಿನ್ನೆಲೆ ರಸ್ತೆಬದಿ ನಿಲ್ಲಿಸಿದ್ದ ಖಾಸಗಿ ಬಸ್ ಬೆಂಕಿಗೆ ಅಹುತಿಯಾದ ಘಟನೆ ಮಂಗಳಾದೇವಿ ಬಳಿ ನಡೆದಿದೆ.
ಮೇ 18ರ ಮಂಗಳವಾರ ಮುಂಜಾನೆ 2 ಗಂಟೆಯ ಸುಮಾರಿಗೆ ಬಸ್ಗೆ ಬೆಂಕಿ ತಗುಲಿದೆ ಎಂದು ಎನ್ನಲಾಗಿದೆ. ಪರಿಣಾಮ ಬಸ್ ಭಾಗಶಃ ಸುಟ್ಟು ಹೋಗಿದೆ. ಪಕ್ಕದಲ್ಲಿ ಬೇರೆ ಬಸ್ಗಳು ನಿಂತಿದ್ದವು. ಆದರೆ, ಆ ಬಸ್ಗಳಿಗೆ ಯಾವುದೇ ಹಾನಿಯಾಗಿಲ್ಲ.
ಲಾಕ್ಡೌನ್ ಹಿನ್ನೆಲೆ ಪ್ರಯಾಣಕ್ಕೆ ಅವಕಾಶವಿಲ್ಲದ ಕಾರಣ ಬಸ್ಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ.
ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.