ಕಾರ್ಕಳ, ಮೇ.17 (DaijiworldNews/HR): ತೌಕ್ತೆ ಚಂಡಮಾರುತದ ಪರಿಣಾಮವಾಗಿ ಸುರಿದ ಅಕಾಲಿ ಮಳೆಯ ಗಾಳಿ ಹಾಗೂ ಸಿಡಿಲಿನ ಅಘಾತಕ್ಕೆ ತಾಲೂಕಿನ ವಿವಿದೆಡೆಗಳಲ್ಲಿ ವಾಸ್ತವ್ಯ ಮನೆಗಳು ಅಂಶಿಕವಾಗಿ ಹಾನಿಗೊಳಗಾಗಿದೆ.
ಶಿರ್ಲಾಲು ಸದಾನಂದ ಎಂಬವರ ಮನೆಗೆ ಸಿಡಿಲು ಬಡಿದಿದ್ದ, ವಿದ್ಯುತ್ ಉಪಕರಣಗಳು ನಾಶ ಉಂಟಾಗಿದ್ದು ರೂ. 6,000 ನಷ್ಟ ಉಂಟಾಗಿದ್ದು, ಮುಂಡ್ಕೂರು ಸಚ್ಚರಿಪೇಟೆ ರತ್ನಾ ಗೌಡ ಅವರ ಮನೆ ಅಂಶಿಕ ಹಾನಿಗೊಳಗಾಗಿ ರೂ.15000 ನಷ್ಟ ಸಂಭವಿಸಿದೆ.
ಇನ್ನು ಅದೇ ಗ್ರಾಮ ಪರಮೇಶ್ವರ ಎಂಬವರ ಮನೆ ಭಾಗಶಃ ಹಾನಿಗೊಳಗಾಗಿ ಸುಮಾರು ರೂ. 20000 ನಷ್ಟ ಸಂಭವಿಸಿದ್ದು, ಎಳ್ಳಾರೆ ಸರೋಜಿನಿ ಎಂಬವರ ವಾಸ್ತವ್ಯ ಮನೆ ಭಾಗಶಃ ಹಾನಿಗೊಳಗಾಗಿ ರೂ.10000 ನಷ್ಟ ಸಂಭವಿಸಿದೆ ಎನ್ನಲಾಗಿದೆ.