ಮಂಗಳೂರು, ಮೇ 17 (DaijiworldNews/MS): ಜನರು ಭಯದಿಂದ ಲಸಿಕೆ ಪಡೆಯುವಂತೆ ಸರ್ಕಾರ ವಾತಾವರಣ ನಿರ್ಮಾಣ ಮಾಡಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಕಿಡಿಕಾರಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರು ಆತ್ಮವಿಶ್ವಾಸ, ಧೈರ್ಯದಿಂದ ಜನರು ಈಗ ಲಸಿಕೆ ಪಡೆಯುತ್ತಿಲ್ಲ. ಅವತ್ತು ನಾನು ಲಸಿಕೆ ಉದ್ಘಾಟನಾ ಮಾಡಿದ ರಾಜಕೀಯ ನಾಯಕರೇ ಮೊದಲು ಲಸಿಕೆ ತೆಗೆದುಕೊಳ್ಳಲಿ ಎಂದು ಹೇಳಿದ್ದೆ. ಆದರೆ ರಾಜಕೀಯ ನಾಯಕರು ತೆಗೆದುಕೊಳ್ಳಲಿಲ್ಲ. ಇದೀಗ ಜನರು ಭಯದಿಂದಲೇ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದರು.
ಲಸಿಕೆ ತಯಾರಿಸಿದ ಕಂಪನಿಯ ಒಡೆಯನೇ ದೇಶ ಬಿಟ್ಟು ಹೋಗಿದ್ದಾರೆ ಅಂದರೆ ನಮ್ಮ ದೇಶದಲ್ಲಿ ಏನು ಆಗುತ್ತಿದೆ ಎಂದು ಪ್ರಶ್ನಿಸಿದರು. ಲಸಿಕೆಗಾಗಿ ಜನರು ಬೆಳಗ್ಗೆ ಬಂದು ಜಗಳ ಮಾಡಲು ಯಾರು ಕಾರಣ ಎಂದು ಪ್ರಶ್ನಿಸಿದ ಅವರು, ಸರ್ಕಾರಕ್ಕೆ ಸ್ಪಷ್ಟ ತೀರ್ಮಾನ ಇಲ್ಲ. ರಾಹುಲ್ ಗಾಂಧಿಯವರು ಅವತ್ತು ಕೊಟ್ಟ ಸಲಹೆಯನ್ನು ನೀವು ಸ್ವೀಕರಿಸಿದ್ದೀರಾ? ಮತ್ಯಾಕೆ ಸಲಹೆ ಕೇಳುತ್ತೀರಿ. ಕಾಂಗ್ರೆಸ್ ಕೊಟ್ಟ ಸಲಹೆಯನ್ನು ನೀವು ಸ್ವೀಕರಿಸುತ್ತೀರಾ? ಎಂದು ಪ್ರಶ್ನಿಸಿದರು.
ಇನ್ನು ಕಡಲ್ಕೊರೆತಕ್ಕೆ ಸರ್ಕಾರ ಪರಿಹಾರ ಕೊಡಬೇಕು. ಕೊರೊನಾ ವಾರಿಯರ್ಸ್ ಗೆ ಕೂಡಾ ಪರಿಹಾರ ಕೊಡಬೇಕು ಅಂದರು.