ಮಂಗಳೂರು,ಮೇ 17 (DaijiworldNews/MS):ತೌಕ್ತೇ ಚಂಡಮಾರುತದ ಪ್ರಭಾವ ಇನ್ನೂ 2 ದಿನ ಕರ್ನಾಟಕದಲ್ಲಿ ಇರಲಿದ್ದು ಈಗಾಗಲೇ ಚಂಡಮಾರುತದ ಪರಿಣಾಮ ಜಿಲ್ಲೆಯ ತೀರ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಚಂಡಮಾರುತದ ಪರಿಣಾಮ ಉಂಟಾಗಿರುವ ಭಾರಿ ಮಳೆ ಗಾಳಿಯಿಂದ ಮೆಸ್ಕಾಂಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ.
ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ ಮೆಸ್ಕಾಂ ಸಹಾಯವಾಣಿಗೆ 1916 ಗೆ ಶನಿವಾರ ಒಂದೇ ದಿನ 5 ಸಾವಿರ ದೂರುಗಳು ಬಂದಿದ್ದು ಅದರಲ್ಲಿ ಮೂರು ಸಾವಿರ ದೂರುಗಳನ್ನು ಅಂದೇ ಪರಿಹರಿಸಲಾಗಿದೆ. ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶನಿವಾರ ದ.ಕ ಜಿಲ್ಲೆಯಲ್ಲಿ 125 ಕಂಬಗಳು , 8 ಟ್ರಾನ್ಸ್ ಫಾರ್ಮರ್ ಗಳಿಗೆ ಹಾನಿಯಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರ ತಿಳಿಸಿದ್ದಾರೆ.
ಉಡುಪಿಯಲ್ಲೂ 105 ವಿದ್ಯುತ್ ಕಂಬ, 8 ಟ್ರಾನ್ಸ್ ಫಾರ್ಮರ್, 4.30 ಕಿ.ಮೀ ವಿದ್ಯುತ್ ತಂತಿ ಸೇರಿದಂತೆ ಒಟ್ಟಾರೆ 21.5 ಲಕ್ಷ ರೂ. ನಷ್ಟವಾಗಿದೆ ಎಂದು ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್ ತಿಳಿಸಿದ್ದಾರೆ.