ಕಾಪು, ಮೇ.16 (DaijiworldNews/HR): ನವಮಂಗಳೂರು ಬಂದರಿನ ಹೊರವಲಯದ 16 ನಾಟಿಕಲ್ ಮೈಲುಗಳಷ್ಟು ದೂರದಲ್ಲಿನ ಕರ್ತವ್ಯಕ್ಕೆ ತೆರಳಿದ್ದ ಎಂಟು ಮಂದಿ ಗುತ್ತಿಗೆ ಕಾರ್ಮಿಕರಿದ್ದ ಹ್ಯಾಟ್ ಎಲ್ಐ ಎಂಬ ಹೆಸರಿನ ಟಗ್ ಸಮುದ್ರದ ಅಲೆಗಳಿಗೆ ಮಗುಚಿ ಬಿದ್ದಿದ್ದು ಪಡುಬಿದ್ರೆಯಲ್ಲಿ ಬಂದು ದಡ ಸೇರಿದೆ.
ಎಂಟು ಕಾರ್ಮಿಕರಲ್ಲಿ ಮೂವರು ಕಟಪಾಡಿ ಮಟ್ಟುಕೊಪ್ಪ ಬಳಿ ದಡ ತಲುಪಿದ್ದು, ಇನ್ನೊಬ್ಬರ ಮೃತದೇಹ ತೆಂಕ ಎರ್ಮಾಳು ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು, ಮೂಲ್ಕಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಐವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚೀಫ್ ಆಫೀಸರ್ ಅಶ್ಫಕ್ ಅಲಿ ಖಲ್ಪೆ ಮತ್ತು ಅವರ ತಂಡದಲ್ಲಿದ್ದ ಉತ್ತರ ಭಾರತ ಮೂಲದವರಾದ, ಝಿಬಾನುಲ್, ಮೊನಿರುಲ್ ಮೊಲ್ಲ, ಕರೀಬುಲ್ ಸಿಯಾಜುಲ್ ಶೇಖ್, ಮೈನುದ್ದೀನ್ ಹೇಕ್ ಶೇಖ್, ಪವನ್ ಚಂದ್ ಕಟೋಚ್, ನಾಜಿಮ್ ಅಹ್ಮದ್ ಮತ್ತು ಹೇಮನಾಥ್ ಎಂದು ಗುರುತಿಸಲಾಗಿದೆ.
ಎಂಆರ್ಪಿಎಲ್ ಗೆ ಸಂಬಂಧಿಸಿದ ಆಯಿಲ್ ನ ಪಂಪಿಂಗ್ ಕಾರ್ಯಕ್ಕೆ ಪ್ರತಿನಿತ್ಯ ತೆರಳತ್ತಿದ್ದು ವಾಪಾಸಾಗುವಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಹೇಮನಾಥ್ ಎಂಬವರ ಶವ ಪತ್ತೆಯಾಗಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಮೊನಿರುಲ್ ಮೊಲ್ಲ (34) ಮತ್ತು ಕರೀಬುಲ್ ಸಿಯಾಜುಲ್ ಶೇಖ್ (24) ಚೇತರಿಸಿಕೊಳ್ಳುತ್ತಿದ್ದಾರೆ.