ಮಂಗಳೂರು, ಮೇ.16 (DaijiworldNews/HR): ತೌಕ್ತೇ ಚಂಡಮಾರುತದ ಪರಿಣಾಮದಿಂದಾಗಿ ಏಕಾಏಕಿ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮವಾಗಿ ಹರೇಕಳ - ಅಡ್ಯಾರ್ ಡ್ಯಾಂ ಕಾಮಗಾರಿಗೆ ಸಂಪೂರ್ಣ ಹಾನಿಯಾಗಿದೆ.
ನಿರ್ಮಾಣದ ಕೆಲಸಕ್ಕೆ ಬಳಸಿದ ಹಲವಾರು ವಸ್ತುಗಳು, ಕಾಮಗಾರಿಗೆ ಅಡ್ಡಹಾಕಲಾದ ಮಣ್ಣು ಸಹಿತ ಸಲಕರಣೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಎನ್ನಲಾಗಿದೆ.
ಶಾಸಕ ಯುಟಿ ಖಾದರ್ ಅವರ ಪ್ರಕಾರ ಈ ಯೋಜನೆಯ ಅಂದಾಜು ವೆಚ್ಚ 200 ಕೋಟಿ ರೂ ಆಗಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಕೆಲಸ ಪೂರ್ಣಗೊಂಡು ಉದ್ಘಾಟನೆಯಾಗುವ ಸಾಧ್ಯತೆಯಿದೆ.
ಈ ಯೋಜನೆಯು ಸೋಮೇಶ್ವರ, ಕೊಣಾಜೆ, ಅಂಬ್ಲಮೊಗರು, ಹರೇಕಳ, ಮುನ್ನೂರು, ಕಿನ್ಯಾ, ತಲಪಾಡಿ, ಸಜಿಪ ಮೂಡಾ, ಪಜೀರ್, ಇರಾ, ಬಾಲೇಪುರಿ ಸೇರಿದಂತೆ ಮಂಗಳೂರು ತಾಲ್ಲೂಕು ಮತ್ತು ಬಂಟ್ವಾಳ ತಾಲ್ಲೂಕುಗಳ 24 ಗ್ರಾಮಗಳಿಗೆ ನೀರು ಒದಗಿಸಲಿದೆ.
ಈ ಕುರಿತು ಮಾತನಾಡಿದ ಹರೇಕಳ ಗ್ರಾಮ ಪಂಚಾಯತ್ ಸದಸ್ಯ ಬದ್ರುದ್ದೀನ್, "ಚಂಡಮಾರುತದ ಪರಿಣಾಮದಿಂದಾಗಿ 24 ನಾಲ್ಕು ಗಂಟೆಗಳಿಗಿಂತ ಹೆಚ್ಚು ಕಾಲ ಮಳೆ ಸುರಿದಂತೆ, ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ, ಇದರ ಪರಿಣಾಮವಾಗಿ ಇದು ಹರೇಕಳ - ಅಡ್ಯಾರ್ ಅಣೆಕಟ್ಟಿನ ಕೆಲಸಕ್ಕೂ ಸಹ ಪರಿಣಾಮ ಬೀರಿದೆ. ಅವರು 70 ಮಂದಿ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಚಂಡಮಾರುತದ ರಭಸಕ್ಕೆ ನಿರ್ಮಾಣದ ಕೆಲಸಕ್ಕೆ ಬಳಸಿದ ಹಲವಾರು ವಸ್ತುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ" ಎಂದರು.