ಮಂಗಳೂರು, ಮೇ 12 (DaijiworldNews/SM): ನ್ಯಾಯ ಬೆಲೆ ಅಂಗಡಿಗಳ ಮೂಲಕ ಪಡಿತರ ಪಡೆಯುವವರಿಗೆ ಸರಕಾರ ರಿಲೀಫ್ ನೀಡಿದೆ. ಆ ಮೂಲಕ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಈ ಬಗ್ಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.
ವಾಹನಗಳನ್ನು ಬಳಸಿಕೊಂಡು ಪಡಿತರ ಪಡೆಯಬಹುದುದಾಗಿದೆ. ಆದರೆ, ಬೆಳಗ್ಗೆ 10 ಗಂಟೆಯೊಳಗೆ ನ್ಯಾಯಬೆಲೆ ಅಂಗಡಿಗೆ ತಲುಪಬೇಕು. 10 ಗಂಟೆಯೊಳಗೆ ತಲುಪಿದವರಿಗೆ 12 ಗಂಟೆಯ ತನಕ ಪಡಿತರ ವಿತರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ನಿತ್ಯ ಒಂದು ನ್ಯಾಯಬೆಲೆ ಅಂಗಡಿಯಲ್ಲಿ 100 ಜನರಿಗೆ ಪಡಿತರ ವಿತರಣೆಗೆ ಸೂಚಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ ವಾಹನವನ್ನು ಬಳಸಿಕೊಂಡು ರೇಷನ್ ಪಡೆಯಬಹುದು ಎಂಬುವುದಾಗಿ ದೈಜಿವರ್ಲ್ಡ್ ವಾಹಿನಿಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ.