ಮಂಗಳೂರು, ಮೇ 12 (DaijiworldNews/MB) : ಕದ್ದ ಮೂರು ಗೋವುಗಳನ್ನು ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬಜ್ಪೆ ಪೊಲೀಸರು ಮಂಗಳವಾರ ಮೇ 11 ರಂದು ಬಂಧಿಸಿದ್ದಾರೆ. ಈ ಮೂರು ಗೋವುಗಳನ್ನು ಆಟೋ ರಿಕ್ಷಾದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಲಾಗಿತ್ತು ಎಂದು ತಿಳಿದು ಬಂದಿದೆ.
ಬಂಧಿತ ವ್ಯಕ್ತಿಗಳನ್ನು ಮೊಹಮ್ಮದ್ ಇರ್ಫಾನ್ (27) ಮತ್ತು ಸಿದ್ದಿಕುಲ್ಲಾ ಅಕ್ಬರ್ (32) ಎಂದು ಗುರುತಿಸಲಾಗಿದೆ.
ಬಂಧಿತ ವ್ಯಕ್ತಿಗಳು ಮತ್ತೆ ನಾಲ್ವರು ಗೋವುಗಳನ್ನು ಕದ್ದು ಹಸುವಿನ ಕೂಗು ಕೇಳದಂತೆ ಅದರ ಬಾಯಿಗೆ ಬಟ್ಟೆ ತುರುಕಿ, ಅವುಗಳ ಕಾಲನ್ನು ಕಟ್ಟಿಹಾಕಿದ್ದರು.
ಈ ಬಗ್ಗೆ ಮಾಹಿತಿ ದೊರೆತ ಆಧಾರದಲ್ಲಿ ಇಬ್ಬರನ್ನು ಬಜ್ಪೆ ಪೊಲೀಸರು ಕೊಂಪಪದವಿನ ಕಟ್ಟೆ ಕಂಬ್ಲದಲ್ಲಿ ಬಂಧಿಸಿದ್ದು ಗೋವುಗಳು ರಕ್ಷಿಸಿ ಆಟೋ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
ಏತನ್ಮಧ್ಯೆ ಈ ಆಟೋ ರಿಕ್ಷಾದ ಹಿಂಬದಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಶಂಕರ್, ಅಖಿಲ್, ಇಸ್ಮಾಯಿಲ್ ಮತ್ತು ನಿಸ್ಸಾರ್ ಪರಾರಿಯಾಗಿದ್ದಾರೆ.