ಮಂಗಳೂರು, ಮೇ 11 (DaijiworldNews/SM): ಮಂಗಳವಾರ ರಾತ್ರಿ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ಬುಧವಾರದಂದು ರಂಜಾನ್ ತಿಂಗಳ ಉಪವಾಸ ವೃತ ಆಚರಣೆಗೆ ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಸೂಚನೆ ನೀಡಿದ್ದಾರೆ.
ಮಂಗಳವಾರದಂದು ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಗುರುವಾರ ಈದುಲ್ ಫಿತ್ರ್ ಆಚರಿಸಲು ಖಾಝಿ ಕರೆ ನೀಡಿದ್ದಾರೆ. ಈಗಾಗಲೇ ಮುಸಲ್ಮಾನ ಬಾಂಧವರು ಪವಿತ್ರ ತಿಂಗಳನ್ನು ಶ್ರದ್ದಾ ಭಕ್ತಿಯಿಂದ ಆಚರಿಸಿದ್ದಾರೆ. ಉಪವಾಸ ವೃತವನ್ನು ನಡಿಸಿ ಈದುಲ್ ಪಿತ್ರ್ ಹಬ್ಬಕ್ಕೆ ಪೂರ್ವ ತಯಾರಿ ನಡೆಸಿದ್ದಾರೆ.
ಸದ್ಯ ಕೊರೋನಾ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಹಾಗೂ ಸರಕಾರದ ಮಾರ್ಗಸೂಚಿ ಇರುವುದರಿಂದ ಈದುಲ್ ಪಿತ್ರ್ ಹಬ್ಬ ಸರವಾಗಿ ಗುರುವಾರದಂದು ಕರಾವಳಿಯಲ್ಲಿ ಆಚರಣೆಯಾಗಲಿದೆ. ಮಸೀದಿಗಳಲ್ಲಿ ಕೇವಲ ಧರ್ಮಗುರುಗಳು ವಿಶೇಷ ಪ್ರಾರ್ಥನೆಯನ್ನು ನೆರವೇರಿಸಲಿದ್ದಾರೆ.