ಕುಂದಾಪುರ, ಮೇ.11 (DaijiworldNews/PY): ಕುಂದಾಪುರ ತಾಲೂಕು ಪಂಚಾಯತ್ ಮಾಜಿ ಸದಸ್ಯ, ಉದ್ಯಮಿ ಹಟ್ಟಿಕುದ್ರು ಬಾಬು ಪೂಜಾರಿ (70) ಅವರು ಹೃದಯಘಾತದಿಂದ ಮೇ.11ರ ಮಂಗಳವಾರದಂದು ನಿಧನರಾದರು.
ಬಾಬು ಪೂಜಾರಿ ಅವರು, ಬಿಲ್ಲವ ಸೇವಾ ಸಂಘ ಕುಂದಾಪುರ, ಬಸ್ರೂರು ವಲಯ ಇದರ ಗೌರವ ಸಲಹೆಗಾರರಾಗಿ, ಹಟ್ಟಿಕುದ್ರು ಮಹಾಗಣಪತಿ ಯುವಕ ಮಂಡಲದ ಗೌರವ ನಿರ್ದೇಶಕರಾಗಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಇವರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.