ಮಂಗಳೂರು, ಮೇ.11 (DaijiworldNews/PY): ಮೇ 10ರಿಂದ ಆರಂಭವಾದ ಲಾಕ್ಡೌನ್ನ ಎರಡನೇ ದಿನದಂದು ನಗರದಲ್ಲಿ ಜನದಟ್ಟಣೆ ಕೊಂಚ ಕಡಿಮೆ ಕಂಡುಬಂದಿದೆ.
ಕೊರೊನಾ ನಿಯಂತ್ರಣ ಹಿನ್ನೆಲೆ ನಗರದಲ್ಲಿ ಕಠಿಣ ನಿಯ ಜಾರಿ ಮಾಡಿದ್ದು, ಪೊಲೀಸರು ಬೆಳಗ್ಗೆ 9ರಿಂದ ಚೆಕ್ ಪೋಸ್ಟ್ನಲ್ಲಿಕಾರ್ಯ ನಿರತರಾಗಿದ್ದಾರೆ. ಡಿಸಿಪಿ ಹರಿ ರಾಂ ಹಾಗೂ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರಿ ನಗರದ ಕ್ಲಾಕ್ಟವರ್ ಬಳಿ ಇರುವ ಚೆಕ್ ಪೋಸ್ಟ್ಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದು, ಅನಗತ್ಯವಾಗಿ ಯಾರೂ ಕೂಡಾ ಹೊರಗೆ ಬಾರದಂತೆ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ವಾಹನ ಸಂಚಾರ ಕಡಿಮೆ ಇದ್ದು, ನಿನ್ನೆಯ ರೀತಿ ಎಲ್ಲೂ ಉಲ್ಲಂಘನೆ ನಡೆದಿಲ್ಲ. ಅಲ್ಲದೇ, ಮಾರುಕಟ್ಟೆಯಲ್ಲೂ ಜನಸಂದಣಿ ಕಡಿಮೆ ಇತ್ತು.
ವಾರಾಂತ್ಯದಲ್ಲಿ ಕರ್ಫ್ಯೂ ಇದ್ದ ಕಾರಣ, ಸೋಮವಾರದಂದು ಅಗತ್ಯ ವಸ್ತುಗಳ ಖರೀದಿಗೆ ಜನರು ಮಾರುಕಟ್ಟೆಗೆ ಧಾವಿಸಿದ್ದು, ಜನಸಂದಣಿ ಹೆಚ್ಚಾಗಿತ್ತು. ಆದರೆ, ನಿನ್ನೆಗೆ ಹೋಲಿಕೆ ಮಾಡಿದರೆ ಮಂಗಳವಾರ ನಗರದಲ್ಲಿ ಜನಸಂದಣಿ ಕಡಿಮೆ ಇದ್ದು, 10.30 ರ ಸುಮಾರಿಗೆ ವಾಹನಗಳ ಸಂಖ್ಯೆಯೂ ಕಡಿಮೆಯಾಗಿರುವುದು ಕಂಡು ಬಂದಿದೆ.
ಮಂಗಳೂರು ನಗರ ಕಮೀಷನರ್ ಎನ್.ಶಶಿಕುಮಾರ್ ಹೇಳಿಕೆ ನೀಡಿದ್ದು, "ಇಂದು ನಗರದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅಲ್ಲದೇ, ಮಂಗಳೂರು ನಗರ ಹೊರವಲಯದಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಿನ್ನೆಯ ದಿನ ನಿಯಮದ ಬಗ್ಗೆ ಸಾರ್ವಜನಿಕರಿಗೆ ಗೊಂದಲವಿತ್ತು. ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ನಿನ್ನೆ ಜನದಟ್ಟಣೆ ಹೆಚ್ಚಾಗಿತ್ತು" ಎಂದು ಹೇಳಿದ್ದಾರೆ.
"ಕಮೀಷನರೇಟ್ ವ್ಯಾಪ್ತಿಯಲ್ಲಿ ಬಲ ಪ್ರಯೋಗ ಹಾಗೂ ಲಾಠಿ ಚಾರ್ಜ್ ಮಾಡಿಲ್ಲ. ಆದರೆ, ಲಾಕ್ಡೌನ್ ನಿಯಮ ಜಾರಿಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.
"ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಠಿಣ ಲಾಕ್ಡೌನ್ ಜಾರಿ ಮಾಡಲಾಗಿದೆ. ಲಾಕ್ಡೌನ್ ನಿಯಮ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಕ್ರಮ ಕೈಗೊಳ್ಳಲು ಆಯಾಯ ಠಾಣೆಗಳಲ್ಲಿ ಪ್ರತ್ಯೇಕವಾದ ತಂಡವನ್ನು ರಚನೆ ಮಾಡಲಾಗಿದೆ. ಕಾನೂನು ಉಲ್ಲಂಘನೆ ಮಾಡಿರುವುದು ಕಂಡಲ್ಲಿ ವಾಹನ ಸೀಜ್ ಮಾಡಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.