ಸುಳ್ಯ, ಮೇ 11(DaijiworldNews/MS): ಅಕ್ರಮ ಮಾರಾಟಕ್ಕೆ ಬಂದೂಕು ತಯಾರಿಸುತ್ತಿದ್ದ ವ್ಯಕ್ತಿಯ ಹಾಗೂ ಬಂದೂಕು ಕೊಂಡುಕೊಂಡ ಇತರ ಮೂವರ ವಿರುದ್ದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದೂಕು ತಯಾರಿಸುತ್ತಿದ್ದಾತನನ್ನು ತಾಲೂಕಿನ ನಲ್ಕೂರು ಗ್ರಾಮದ ಛತ್ರಪ್ಪಾಡಿ ಮನೆಯ ನಿವಾಸಿ ದಿವಂಗತ ನಾರಾಯಣ ಆಚಾರಿ ಅವರ ಪುತ್ರ ದಿವಾಕರ್ ಆಚಾರಿ ಸಿ ಎಚ್ (52) ಎಂದು ಗುರುತಿಸಲಾಗಿದೆ.
ದಿವಾಕರ್ ಆಚಾರಿಯೂ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಬಂದೂಕು ತಯಾರಿಸಿ ಮಾರಾಟ ಸಲುವಾಗಿ ತನ್ನ ವಶದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರಜೋಗಿ ಮತ್ತು ಸುಬ್ರಹ್ಮಣ್ಯ ಎಸ್ ಐ ಓಮನ ಅವರ ನೇತೃತ್ವದ ತಂಡ ಮೇ 10 ರ ಸೋಮವಾರ ದಾಳಿ ನಡೆಸಿ ಒಂದು ಬಂದೂಕು ಹಾಗೂ ಸಜೀವ ತೋಟೆಯನ್ನು ವಶಪಡಿಸಿಕೊಂಡಿದ್ದಾರೆ.
ದಿವಾಕರ್ ನೀಡಿದ ಮಾಹಿತಿಯ ಆಧಾರದಂತೆ, ಅಕ್ರಮವಾಗಿ ಬಂದೂಕು ಕೊಂಡುಕೊಂಡ , ಕಡಬ ನೂಚಿಲ ಮನೆಯ ಕಾರ್ತಿಕ್ (25) , ಕಡಬ ಬಿಳಿನೆಲೆಯ ಚಿದ್ಗಲ್ ಮನೆಯ ಆಶೋಕ್ ಎ (35) ಹಾಗೂ ಹಾಸನ ಹೊಸಕೊಪ್ಪಲು ಕಿರ್ಸಾನ್ ಕಾಲೋನಿಯ ಚಂದನ್(33) ಎಂಬ ಮೂವರು ಆರೋಪಿಗಳ ಬಳಿ ಇದ್ದ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೇಲಿನ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ.