ಉಳ್ಳಾಲ, ಮೇ 10 (DaijiworldNews/SM): ವರ್ಕ್ ಫ್ರಮ್ ಹೋಂನಲ್ಲಿದ್ದ ಬೆಂಗಳೂರಿನ ಐಟಿ ಉದ್ಯೋಗಿ ಉಳ್ಳಾಲ ನಿವಾಸಿ ಶ್ರೀಕಾಂತ್ ಪ್ರಭು(40) ಹೃದಯಾಘಾತಕ್ಕೆ ಒಳಗಾಗಿ ಸೋಮವಾರ ನಿಧನ ಹೊಂದಿದ್ದಾರೆ.
ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಬಳಿ ಮನೆಯ ವಾಸುದೇವ ಪ್ರಭು ಮತ್ತು ತಾರಾಮತಿ ದಂಪತಿ ಎರಡನೇ ಪುತ್ರ ಶ್ರೀಕಾಂತ್ ವಿವಾಹಿತರಾಗಿದ್ದು, ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.
ಲಾಕ್ ಡೌನ್ ಘೋಷಣೆ ಬಳಿಕ ಬೆಂಗಳೂರಿನಿಂದ ಊರಿಗೆ ವಾಪಸ್ ಮರಳಿದ್ದ ಶ್ರೀಕಾಂತ್, ಮನೆಯಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುತ್ತಿದ್ದರು. ಇಂದು ಸಂಜೆ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.