ಮಂಗಳೂರು, ಮೇ.10 (DaijiworldNews/PY): ಸತತ ಕಳೆದ 12 ದಿನಗಳಿಂದ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದು, ಸೋಮವಾರ ಕಣ್ಣೂರು ವಾರ್ಡ್ ಕಾಂಗ್ರೆಸ್ ಸಹಭಾಗಿತ್ವದಲ್ಲಿ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್, ಮಾರ್ಕೆಟ್ ಮತ್ತು ಲೇಡಿಗೋಷನ್ ಆಸ್ಪತ್ರೆಯ ಪರಿಸರದಲ್ಲಿ 500ಕ್ಕೂ ಹೆಚ್ಚು ಜನರಿಗೆ ಊಟ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ್, ಕಡೆಕ್ಕಾರ್ ಹಮೀದ್, ಇ.ಕೆ ರಫೀಕ್, ಮನಪಾ ಸದಸ್ಯ ಅಶ್ರಫ್ ಕೆ, ನಝೀರ್ ಬಜಾಲ್, ಷರೀಫ್ ಐಮೋನ್, ಶರೀಫ್ ಕಣ್ಣೂರು, ಹುಸ್ಸೈನಾ, ಸೌಹಾನ್ ಎಸ್.ಕೆ, ಹಸನ್ ಡೀಲ್ಸ್, ಮೀನಾ ಟೆಲಿಸ್, ತೃಪ್ತಿ ಕೋಟಿಯನ್, ಮಕ್ಷು, ಅಲ್ಫಾಝ್ ಹಾಜರಿದ್ದರು.