ಮಂಗಳೂರು, ಮೇ.10 (DaijiworldNews/PY): ಕೊರೊನಾ ಸಂಕಷ್ಟದ ಸಂದರ್ಭ ಕುವೈಟ್ನಿಂದ ವೈದ್ಯಕೀಯ ಆಕ್ಸಿಜನ್ ತುಂಬಿದ ಎರಡು ಕಂಟೈನರ್ಗಳು ಐಎನ್ಎನ್ ಕೋಲ್ಕತ್ತ ಹಡಗಿನ ಮೂಲಕ ಸೋಮವಾರ ನವಮಂಗಳೂರಿಗೆ ಬಂದರಿಗೆ ಆಗಮಿಸಿದೆ.
ಮಂಗಳೂರು ನಗರ ಉತ್ತರ ಶಾಸಕ ಡಾ.ವೈ.ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹಾಗೂ ಪ್ರಮುಖರು ಹಡಗನ್ನು ಬರಮಾಡಿಕೊಂಡರು. ಈ ವೇಳೆ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಕುವೈತ್ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು.
ಕುವೈಟ್ನಿಂದ ಬಂದ ಐಎಸ್ಒ ಟ್ಯಾಂಕ್ಗಳಲ್ಲಿ ತುಂಬಿದ 40 ಮೆ. ಟನ್ ಆಮ್ಲಜನಕವನ್ನು 1,400 ಗಂಟೆಗಳ ಕಾಲ ಹೊತ್ತ ಐಎನ್ಎಸ್ ಕೋಲ್ಕತಾ ಹಡಗು ಇಂದು ಎನ್ಎಂಪಿಟಿಯನ್ನು ತಲುಪಿದೆ. ಅಲ್ಲದೇ, 5 ಟನ್ ಆಕ್ಸಿಜನ್ ಸಿಲಿಂಡರ್ ಹಾಗೂ 4 ಆಕ್ಸಿಜನ್ ಕಾನ್ಸಟ್ರೇಟರ್ಗಳನ್ನು ತಲುಪಿಸಿದೆ.
ಮಂಗಳವಾರ ಇನ್ನೆರಡು ಹಡಗುಗಳ ಮೂಲಕ ನಾಲ್ಕು ಕಂಟೈನರ್ಗಳಲ್ಲಿ ವೈದ್ಯಕೀಯ ಆಕ್ಸಿಜನ್ ಪೂರೈಕೆಗೆ ಕುವೈಟ್ ಸರ್ಕಾರ ಮುಂದಾಗಿದೆ.
ಈ ಸಂದರ್ಭ ಕೋಸ್ಟ್ ಗಾರ್ಡ್ ಡಿಐಜಿ ವೆಂಕಟೇಶ್, ಕೆ.ವಿ. ಎನ್ ಎಂಪಿಟಿ ಚೇಯರ್ ಮನ್ ಎ.ವಿ ರಮಣ್, , ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ಮಾಜಿ ಸಚಿವ ನಾಗರಾಜ ಶೆಟ್ಟಿ, ಉಮಾನಾಥ ಕೋಟ್ಯಾನ್, ಸಹಾಯಕ ಆಯುಕ್ತ ಮದನ್ ಮೋಹನ್, ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.