ಉಡುಪಿ, ಮೇ. 10 (DaijiworldNews/HR) : ಜಿಲ್ಲೆಯಲ್ಲಿ ಇಂದು ಲಾಕ್ಡೌನ್ಗೆ ನಾಗರಿಕರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸ್ವತಃ ಕಲ್ಸಂಕದ ಚೆಕ್ಪೋಸ್ಟ್ನಲ್ಲಿ ಕುಳಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಬೆಳಿಗ್ಗೆ 6 ಗಂಟೆಯಿಂದಲೇ ಫಿಲ್ಡ್ಗಿಳಿದ ಪೊಲೀಸರು ಪ್ರತಿಯೊಂದು ವಾಹನಗಳನ್ನು ಪರಿಶೀಲಿಸುತ್ತಿದ್ದರು.
ಕಳೆದ ವಾರಕ್ಕೆ ಹೋಲಿಸಿದರೆ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಇರುವ ಮೂಲಕ ಈ ವಾರ ಲಾಕ್ಡೌನ್ ಅನ್ನು ಬೆಂಬಲಿಸಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ತಮ್ಮ ಕರ್ತವ್ಯಕ್ಕಾಗಿ ಅನುಮತಿ ಪಡೆದ ಕೆಲವರು ಮತ್ತು ಸರ್ಕಾರಿ ಅಧಿಕಾರಿಗಳು ಮಾತ್ರ ರಸ್ತೆಯಲ್ಲಿ ಕಾಣಿಸಿಕೊಂಡರು.
ಅಗತ್ಯ ವಸ್ತುಗಳನ್ನು ಖರೀದಿಸುವ ಸಲುವಾಗಿ ಜನರು ಬೆಳಿಗ್ಗೆ ಮಾರುಕಟ್ಟೆಗಳಲ್ಲಿ ನಿರತರಾಗಿದ್ದರು.
ಜನನಿಬೀಡ ರಾಷ್ಟ್ರೀಯ ಹೆದ್ದಾರಿಗಳು, ಸಂತೇಕಟ್ಟೆ ಮಣಿಪಾಲ್-ಉಡುಪಿ ಮುಖ್ಯ ರಸ್ತೆ, ಕೆ.ಎಂ ರಸ್ತೆ, ಚಿತ್ತರಂಜನ್ ಸರ್ಕಲ್, ಟೈಗರ್ ಸರ್ಕಲ್ ಮತ್ತು ಡಯಾನಾ ರಸ್ತೆಯಲ್ಲಿ ಜನಸಂಕ್ಯೆಯೇ ಇರಲಿಲ್ಲ.
ಸರಕು ವಾಹನಗಳು, ಸರ್ಕಾರಿ ಸೇವಾ ವಾಹನಗಳು ಮತ್ತು ಆಂಬುಲೆನ್ಸ್ಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ ಕೂಡ ಖಾಲಿಯಾಗಿತ್ತು.
ಇನ್ನು ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಸಂಚಾರಕ್ಕೆ ಅನುವು ಮಾಡಿಕೊಡುವ ಜಿಲ್ಲೆಯ ನಾಲ್ಕು ಪ್ರಮುಖ ಗಡಿಗಳನ್ನು ಮುಚ್ಚಲಾಗಿದ್ದು, ಹಗಲಿನಲ್ಲಿ 29 ಚೆಕ್ ಪೋಸ್ಟ್ಗಳು ಮತ್ತು ರಾತ್ರಿಯಲ್ಲಿ 19 ಚೆಕ್ ಪೋಸ್ಟ್ಗಳು ಕಾರ್ಯನಿರ್ವಹಿಸುತ್ತವೆ. ಆರೋಗ್ಯ ತುರ್ತು ಸಂದರ್ಭದಲ್ಲಿ ಮಾತ್ರ ಜನರು ತಮ್ಮ ಮನೆಗಳಿಂದ ಹೊರಬರಲು ಅವಕಾಶವಿದೆ.