ಕಾರ್ಕಳ, ಮೇ 10 (DaijiworldNews/MS):ತೀವ್ರತರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಗೆ ಸಕಾಲದಲ್ಲಿ ಚಿಕಿತ್ಸೆ ದೊರಕದ ಹಿನ್ನಲೆಯಲ್ಲಿ ಯುವತಿಯೊಬ್ಬಳು ಸಾವಿಗೀಡಾದ ಘಃಟನೆ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಎದೆನೋವು ಮತ್ತು ಉಸಿರಾಟದ ಸಮಸ್ಸೆಯಿಂದ ಬಳಲುತ್ತಿದ್ದ ನಲ್ಲೂರು ಗ್ರಾಮದ ಪರಪ್ಪಾಡಿಯ ಮಂಜುಳಾ(33) ಘಟನೆಯಲ್ಲಿಮೃತಪಟ್ಟ ದುರ್ದೈವಿ. ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಚಿಕಿತ್ಸೆಗೆಂದು ಸಂಬಂಧಿಕರು ಯುವತಿಯನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆತಂದರಾದರೂ ಸಕಾಲದಲ್ಲಿ ಚಿಕಿತ್ಸೆ ದೊರಕಿಲ್ಲ. ಯುವತಿಯನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆ ಬಜಗೋಳಿ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ವಾಹನವನ್ನು ಪೊಲೀಸರು ತಡೆ ಹಿಡಿದಿದ್ದರು. ಅದೇ ಕಾರಣದಿಂದ ಗ್ರಾಮೀಣ ರಸ್ತೆ ಮೂಲಕವಾಗಿ ಆಸ್ಪತ್ರೆಗೆ ಕರೆತರುಗವಾಗ ವಿಳಂಬಕ್ಕೆ ಕಾರಣವಾಗಿದೆ ಎಂದು ಮೃತ ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದರೆ 108 ಅಂಬುಲೆನ್ಸ್ನಲ್ಲಿ ಕರೆದೊಯ್ಯಿರಿ:
ಉಸಿರಾಟ,ಎದೆ ನೋವು ಸಮಸ್ಸೆಯಿಂದ ಗಂಭೀರ ಸ್ಥಿತಿಯಲ್ಲಿದ್ದರೆ 108 ಅಂಬಿಲೆನ್ಸ್ನಲ್ಲಿ ಕರೆದೊಯ್ಯಿರಿ. ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ವಾಹನಗಳನ್ನು ಬಿಡುವುದಕ್ಕೆ ಅನುಮತಿ ಇರುವುದಿಲ್ಲ. ಹೀಗೆಂದು ಹೇಳಿದವರೇ ಬಜಗೋಳಿ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರು ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.
ಸಹೋದರಿಯ ಆಕ್ರಂದನ:
ಅಕ್ಕ ಮೃತಪಟ್ಟರೆಂದು ತಿಳಿದ ತಕ್ಷಣವೇ ಆಕೆಯ ತಂಗಿಯ ಆಕ್ರಂದನ ಮುಗಿಲು ಮುಟ್ಟಿತು. ಅಕ್ಕನನ್ನು ತಾನು ನೋಡಬೇಕು ಎಂದು ಐಸಿಯು ಬಾಗಿಲು ಬಡಿದ ತಂಗಿ, ನನ್ನ ಅಕ್ಕನಿಗೆ ಯಾವುದೇ ತೊಂದರೆಯಿರಲಿಲ್ಲ. ಎದೆನೋವು ಕಾಣಿಸಿಕೊಂಡಿತ್ತಾದರೂ ಗಂಭೀರ ಸಮಸ್ಯೆಯಾಗಿರಲಿಲ್ಲ. ನಾವು ಮಾತನಾಡಿಕೊಂಡೆ ಬರುತ್ತಿದ್ದೆವು. ಇಲ್ಲಿ ಬಂದರೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಅಕ್ಕನನ್ನು ಕೊಂದೇ ಬಿಟ್ಟರು ಎಂದು ಗೋಗರೆದರು.
ಸಂಸದೆ ಮಾಹಿತಿ ನೀಡಿದ್ದರು:
ತಾಲೂಕು ಪಂಚಾಯುತ್ ಸಭಾಂಗಣದಲ್ಲಿ ಆಯೋಜಿಸಿದ ತಾಲೂಕು ಮಟ್ಟದ ವಿವಿಧ ಇಲಾಖಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ತಾಲೂಕು ಸರಕಾರಿ ಆಸ್ಪತ್ರೆಯ ಕುರಿತು ವಿವಿಧ ಆರೋಪಗಳು ರೋಗಿಗಳಿಂದ ಕೇಳಿಬರುತ್ತಿದೆ. ಅಲ್ಲಿಗೆ ಹೋಗುವಂತಹ ರೋಗಿಗಳಿಗೆ ಆಸ್ಪತ್ರೆಯ ಸಿಬ್ಬಂದಿಗಳು ಸಮರ್ಪಕವಾಗಿ ಸ್ಪಂದಿಸುದಿಲ್ಲ. ಈ ಕೂಡಲೇ ಸೂಕ್ತ ಕ್ರಮ ಕೈಕೊಳ್ಳಬೇಕು. ಆಸ್ಪತ್ರೆಯ ಮುಂಭಾಗದಲ್ಲಿ ಕೌಂಟರ್ ತೆರೆಯಬೇಕು. ವೈದ್ಯರು ಅಥವಾ ಖಾಯಂ ನರ್ಸ್ ಒಬ್ಬರನ್ನು ಅಲ್ಲಿ ನಿಯೋಜಿಸಿ ಅಲ್ಲಿಗೆ ಬರುವವಂತಹ ರೋಗಿಗಳಿಗೆ ಯೋಗ ಕ್ಷೇಮ ವಿಚಾರಿಸಿ ಅಗತ್ಯ ಚಿಕಿತ್ಸೆ ನೀಡುವಂತಾಗಬೇಕು ಎಂದು ಅದೇಶಿಸಿದ್ದರು. ಸಂಸದರು ನೀಡಿದ ಅದೇಶ ಮೂರು ದಿನ ಕಳೆಯುವ ಮುನ್ನವೇ ಕವಡೆ ಕಾಸಿನ ಕಿಮ್ಮತ್ತು ನೀಡದ ಅಧಿಕಾರಿಗಳಿಂದಾಗಿ ನತದೃಷ್ಠ ಯುವತಿಯೊಬ್ಬಳು ಜೀವತ್ತೆತ್ತಿದ್ದಾಳೆಂಬ ಆರೋಪ ಕೇಳಿಬರುತ್ತಿದೆ.
ಚೆಕ್ಪೋಸ್ಟ್ ಪೊಲೀಸರ ವಿರುದ್ಧ ಆರೋಪ ಸಲ್ಲದು -ಸಂಪತ್ ಪೊಲೀಸ್ ವೃತ್ತ ನಿರೀಕ್ಷಕ,ಕಾರ್ಕಳ
ಯುವತಿಯ ಸಾವಿನ ಪ್ರಕರಣದಲ್ಲಿ ಬಜಗೋಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರ ಲೋಪ ಕಂಡುಬಂದಿಲ್ಲ. ಯುವತಿಯನ್ನು ಸಾಗಿಸುತ್ತಿದ್ದ ವಾಹನವು ಬಜಗೋಳಿ ಚೆಕ್ಪೋಸ್ಟ್ ಸನಿಹಕ್ಕೆ ಬಂದಿಲ್ಲ. ಯುವತಿಯನ್ನು ಕಾರ್ಕಳದ ಖಾಸಗಿ ಆಸ್ಪತ್ರೆಯೊಂದಲ್ಲಿ ೨ ಗಂಟೆಗೂ ಮಿಕ್ಕಿ ವೇಳೆಯಲ್ಲಿ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿದರು. ಗಂಭೀರ ಸ್ಥಿತಿಯಲ್ಲಿ ಇದ್ದುದರಿಂದ ಯುವತಿಯನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲು ಅಲ್ಲಿನ ವೈದ್ಯರು ನೀಡಿದ ಸಲಹೆಯಂತೆ ಯುವತಿಯನ್ನು ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಲಾಗಿತ್ತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಯುವತಿ ಮೃತಪಟ್ಟಿದ್ದಾಳೆಂದು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಸಂಪತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.