ಮಂಗಳೂರು, ಮೇ. 10 (DaijiworldNews/HR): ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಇಂದಿನಿಂದ ಲಾಕ್ಡೌನ್ ವಿಧಿಸಿದ್ದು, ಬೆಳ್ಳಗ್ಗೆ 6 ರಿಂದ 10ಗಂಟೆಯ ವರೆಗೆ ದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಅವಕಾಶ ನೀಡಿದ್ದು, ನಗರದ ಕಾಕ್ಲ್ ಟವರ್ ಮುಂದುಗಡೆಯಿಂದ ಕೇಂದ್ರ ಮಾರುಕಟ್ಟೆಗೆ ಸಾಗುವ ರಸ್ತೆಯಲ್ಲಿ ದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಜನರು ಮುಗಿಬಿದ್ದಿದ್ದರಿಂದ ಸಾಮಾಜಿಕ ಅಂತರವನ್ನು ಕಾಪಾಡಲು ಪೋಲಿಸರು ಮನವಿ ಮಾಡಿಕೊಂಡಿದ್ದಾರೆ.
ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಆದೇಶಿದ್ದು, ಪೊಲೀಸರು ಬೆಳ್ಳಂಬೆಳ್ಳಗ್ಗೆ ಫಿಲ್ಡ್ಗಿಳಿದಿದ್ದು, ನಗರದಲ್ಲಿ ಸಾರ್ವಕರಿಗೆ ಹಾಗೂ ಪೋಲಿಸರಿಗೆ ಮಾತಿನ ಚಕಮಕಿ ನಡೆದಿದೆ.
ಇನ್ನು ನಗರದಾದ್ಯಂತ ಅನೇಕ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ವಾಹನ ಚಾಲನೆಯನ್ನು ನಿಯಂತ್ರಿಸಲು ಪೋಲಿಸರು ಹರ ಸಾಹಸ ಪಟ್ಟಿದ್ದಾರೆ.
ರೇಷನ್ ತೆಗೆದುಕೊಳ್ಳುವುದಕ್ಕೂ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿದ್ದು, ಅಂತರವನ್ನು ಕಾಪಾಡಲು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಇಂದಿನಿಂದ ಆರಂಭವಾದ ಲಾಕ್ಡೌನ್ 14 ದಿನಗಳ ವರೆಗೆ ಮುಂದುವರೆಯಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.