ಮಂಗಳೂರು, ಮೇ 09 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್ಡೌನ್ನ ಎರಡನೇ ದಿನ ನಗರದಲ್ಲಿ ಹಾಲಿನ ಬೂತ್ಗಳು, ಮೆಡಿಕಲ್ಗಳು, ಕೆಲವು ಹಾಪ್ಕಾಮ್ಗಳು ಮಾತ್ರ ತೆರೆದಿದ್ದು ಬೆಳಿಗ್ಗೆ 9 ಗಂಟೆಯ ನಂತರ ನಗರವು ಸ್ತಬ್ಧವಾಗಿದೆ.
ನಗರದಲ್ಲಿ, ಕರ್ಫ್ಯೂ ಅನುಸರಿಸಿ, ಇನ್ನೂ, ಕೆಲವು ತರಕಾರಿ ಮಾರಾಟಗಾರರು ತಮ್ಮ ಉತ್ಪನ್ನಗಳನ್ನು ಬೀದಿಗಳಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇನ್ನು ಕೆಲವು ಮೀನು ಮಾರಾಟಗಾರರು ದ್ವಿಚಕ್ರ ವಾಹನಗಳಲ್ಲಿ ಮೀನು ಮಾರಾಟ ನಡೆಸಿದ್ದು ಕೂಡಾ ಕಂಡುಬಂದಿದೆ.
ಕೆಲವು ಸ್ಥಳಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಜನರು ಹಾಲು, ತರಕಾರಿಗಳು ಮತ್ತು ಮೀನುಗಳನ್ನು ಖರೀದಿಸಿದ್ದಾರೆ. ಒಟ್ಟಾರೆಯಾಗಿ ಬೆಳಿಗ್ಗೆ 9 ಗಂಟೆಯ ನಂತರ ನಗರವು ಸಂಪೂರ್ಣವಾಗಿ ನಿರ್ಜನ ನೋಟವನ್ನು ಧರಿಸಿತ್ತು.
ಶನಿವಾರ, ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ, ಉಳಿದ ದಿನಗಳಲ್ಲಿ ಆರು ಗಂಟೆಯಿಂದ ಮೂರು ಗಂಟೆಗಳವರೆಗೆ ಖರೀದಿಗೆ ಅನುವು ಮಾಡಿಕೊಟ್ಟು ಭಾನುವಾರ, ಶನಿವಾರ ಕೇವಲ 9 ರವರೆಗೆ ಹಾಲಿನ ಅಂಗಡಿಗಳು ಮತ್ತು ಹಾಪ್ಕಾಮ್ಗಳಿಗೆ ಮಾತ್ರ ಅವಕಾಶ ನೀಡಿ ಬಳಿಕ ಸಂಪೂರ್ಣ ಲಾಕ್ಡೌನ್ ಮಾಡಲು ಜಿಲ್ಲಾಡಳಿತ ಶುಕ್ರವಾರ ನಿರ್ಧರಿಸಿದೆ.
ವಾರಾಂತ್ಯದ ಲಾಕ್ಡೌನ್ನಲ್ಲಿ ದಿನಸಿ, ಮೀನು, ಮಾಂಸ ಮತ್ತು ಇತರ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವುದನ್ನು ಆಡಳಿತ ನಿಷೇಧಿಸಿದೆ. ನಗರದ ಹಲವಾರು ಸ್ಥಳಗಳಲ್ಲಿ ಪೊಲೀಸರು ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಜನರ ಅನಗತ್ಯ ಚಲನವಲನಗಳನ್ನು ಪರಿಶೀಲಿಸಲು ಪೊಲೀಸ್ ಗಸ್ತು ತಿರುಗುತ್ತಿದ್ದಾರೆ.