ಕಾರ್ಕಳ, ಮೇ 08 (DaijiworldNews/MB) : ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೆಂಟರ್ ಸ್ಥಾಪನೆಯ ಕೆಲಸ ತಕ್ಷಣದಿಂದ ಆರಂಭವಾಗಲಿದೆ. ಕಾರ್ಕಳ ತಾಲೂಕಿಗೆ ಅಗತ್ಯವಾಗಿ ಬೇಕಾದ ಆಕ್ಸಿಜನ್ನ್ನು ಇಲ್ಲೇ ಸಿದ್ಧಪಡಿಸಲಾಗುತ್ತದೆ. ಜಿ.ಶಂಕರ್ ಫೌಂಡೇಶನ್ ನಿಂದ ಕಾಮಗಾರಿ ಶೀಫ್ರ ಆರಂಭವಾಗಲಿದೆ. 500 ಲೀ.ಘಟಕ ಇದರಲ್ಲಿ ಒಳಗೊಳಲಿದೆ. ಹೆಬ್ರಿ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಮಾಡಲು ವೈದ್ಯಕೀಯ ಸಲಕರಣೆಗಳು ತಲುಪಿದ್ದು, ಅಗತ್ಯ ಸೌಲಭ್ಯದೊಂದಿಗೆ ಆರ್ಹ ಸಿಬ್ಬಂದಿಗಳನ್ನು ನೇಮಕ ಮಾಡುವುದಾಗಿ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಕೋವಿಡ್-19 ನಿರ್ವಹಣೆ ಕುರಿತು ಕಾರ್ಕಳ ತಾಲೂಕು ಶಾಸಕ ಹಾಗೂ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತಾನಾಡಿರುವ ಕುರಿತು ಅವರು ಮಾಹಿತಿ ನೀಡಿದರು.
ಸರಕಾರಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಅನುಖೂಲವಾಗುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿಉ ಸರಕಾರಿ ಆಸ್ಪತ್ರೆಯಲ್ಲಿ ಫ್ರಂಟ್ ಟೇಬಲ್ ವ್ಯವಸ್ಥೆ ತೆರೆಯುವಂತೆ ಅಧಿಕಾರಿಗಳಿಗೆ ಹೀಗಾಗಲೇ ಸೂಚನೆ ನೀಡಲಾಗಿದೆ.
ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯ ಕುರಿತು ರೋಗಿಗಳಿಂದ ಹಲವು ದೂರುಗಳು ಬರುತ್ತಿದೆ. ಆಸ್ಪತ್ರೆಗೆ ಹೋಗುವಂತಹ ರೋಗಿಗಳಿಗೆ ಸ್ಪಂದಿಸುವುದಕ್ಕೂ ಮುಂದಾಗುತ್ತಿಲ್ಲ. ಈ ಹಿನ್ನಲ್ಲೆಯಲ್ಲಿ ಆಸ್ಪತ್ರೆಯ ಮುಂಭಾಗದಲ್ಲಿ ಕೌಂಟರ್ ತೆರೆಯಲಾಗುವುದು. ವೈದ್ಯರನ್ನು ಇಲ್ಲವೇ ಖಾಯಂ ನರ್ಸ್ಗಳನ್ನು ಅದಕ್ಕಾಗಿ ನಿಯೋಜಿಸಲಾಗುವುದು. ಅಲ್ಲಿಗೆ ಬರುವಂತಹ ರೋಗಿಗಳಿಗೆ ಪರೀಕ್ಷಿಸಿ ತುರ್ತು ಚಿಕಿತ್ಸೆಯ ಅಗತ್ಯ ವಿದ್ದರೆ ದಾಖಲಿಸಲು ಇದರಿಂದ ಸಾಧ್ಯವೆಂದರು.
ಬೆಡ್ಗಳ ಗೊಂದಲ
ಜಿಲ್ಲೆಯ ಆಸ್ಪತ್ರೆಗಳಲ್ಲಿ ಇರುವ ಬೆಡ್ಗಳ ಮಾಹಿತಿ ತಿಳಿಯದೇ ರೋಗಿಗಳು ಗೊಂದಲಕ್ಕೀಡಾಗಿದ್ದಾರೆ. ಅದಕ್ಕಾಗಿ ನೊಂಡೇಲ್ ಅಧಿಕಾರಿಗಳನ್ನು ನೇಮಿಸಿ ರೋಗಿಯ ತೀವ್ರತೆಯ ಆಧಾರದಲ್ಲಿ ರೋಗಿಗೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ, ವೆಂಟಿಲೇಟರ್, ಆಕ್ಸಿಜನ್ ಬೆಡ್ಗೆ ದಾಖಲಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಗಹತ್ಯವಿದ್ದಲ್ಲಿ ಜನರಲ್ ಬೆಡ್ನ್ನು ಆಕ್ಸಿಜನ್ ಬೆಡ್ ಆಗಿ ಪರಿವರ್ತಿಸಲಾಗುವುದೆಂದರು.
ಪೂರ್ವ ನಿರ್ಧರಿತ ಸಭೆ
ಕಾರ್ಕಳದಲ್ಲಿ ತಾನು ಆಯೋಜಿಸಿದ ಅಧಿಕಾರಿಗಳ ಮಟ್ಟದ ಸಭೆಯು ಪೂರ್ವ ನಿರ್ಧರಿತದಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ತಾಲೂಕು ಮಟ್ಟದ ಸಭೆಗಳನ್ನು ತಾಲೂಕು ಕೇಂದ್ರಗಳಲ್ಲಿಯೇ ನಡೆಸುತ್ತಿದ್ದೇನೆ. ಕಾರ್ಕಳ ತಾಲೂಕಿನಲ್ಲಿ ವಿಶೇಷ ಸಭೆ ನಡೆಸಿದಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಶಾಸಕ ವಿ.ಸುನೀಲ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.