ಕುಂದಾಪುರ, ಮೇ.08 (DaijiworldNews/PY): ಲಾಕ್ಡೌನ್ ವೇಳೆ ನಾರಾಯಣ ಗುರು ಯುವಕ ಮಂಡಲದ ವತಿಯಿಂದ ಹಸಿದವರಿಗೆ ಊಟ ನೀಡಲಾಯಿತು.
ಕುಂದಾಪುರ ಪರಿಸರದಲ್ಲಿ ಹಸಿದವರಿಗೆ, ವಿಕಲ ಚೇತನರಿಗೆ, ಲಾರಿ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಸುಮಾರು 250 ಮಂದಿ ಹಸಿದವರಿಗೆ ಕುಂದಾಪುರ ಶ್ರೀ ನಾರಾಯಣಗುರು ಯುವಕ ಮಂಡಲದ ವತಿಯಿಂದ ಊಟ ನೀಡಲಾಯಿತು.
ಈ ವೇಳೆ, ಶ್ರೀ ನಾರಾಯಣ ಗುರು ಯುವಕ ಮಂಡಲ (ರಿ.) ಅಧ್ಯಕ್ಷ ಶ್ರೀನಾಥ್ ಕಡ್ಗಿ ಮನೆ, ಕಾರ್ಯದರ್ಶಿ ವಿಜಯ್ ಪೂಜಾರಿ, ಕಿರಣ್ ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.