ಮಂಗಳೂರು, ಮೇ.08 (DaijiworldNews/PY): ಫಜೀರು ಮರ್ಸಿಯಮ್ಮನವರ ಹಳೇ ಚರ್ಚಿಗೆ ಸಿಡಿಲು ಬಡಿದ ಘಟನೆ ಮೇ 7ರ ಶುಕ್ರವಾರ ರಾತ್ರಿ ನಡೆದಿದೆ.
ಸಿಡಿಲು ಬಡಿದ ಪರಿಣಾಮ ಚರ್ಚ್ನ ಮುಖ್ಯ ಗೋಪುರಕ್ಕೆ ಹಾನಿಯಾಗಿದೆ.
ಘಟನೆ ಸಂದರ್ಭ ಸ್ಥಳದಲ್ಲಿ ಯಾರೂ ಇರದ ಕಾರಣ ಪ್ರಾಣಹಾನಿ ಸಂಭವಿಸಿಲ್ಲ.
ಶುಕ್ರವಾರ ಈ ಪ್ರದೇಶದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಿತ್ತು.