ಮಂಗಳೂರು, ಮೇ 08 (DaijiworldNews/MS): ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಜಿಲ್ಲಾಧಿಕಾರಿಗಳ ಆದೇಶ ಸಂ. ಎಂಎಜಿ(2) ಸಿಆರ್.156/2021/ 133465/ ಸಿ4/7 06-05-2021 ರಂತೆ ಹೆಚ್ಚುವರಿ ಮಾರ್ಗಸೂಚಿಗಳನ್ನು ಮತ್ತು ವಾರಂತ್ಯದ ಕರ್ಪ್ಯೂ ಜಾರಿಗೊಳಿಸಲಾಗಿರುತ್ತದೆ.
ವಾರಾಂತ್ಯದ ಕಫ್ರ್ಯೂ ಸಂದರ್ಭದಲ್ಲಿ ನಂದಿನಿ ಹಾಲಿನ ಬೂತ್ ಗಳು, ದಿನ ಪತ್ರಿಕೆಗಳು ಮತ್ತು ಜಿಲ್ಲೆಯಲ್ಲಿನ ಹಾಪ್ ಕಾಮ್ಸ್ ಗಳಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಕಾರ್ಯಾಚರಿಸಲು ಅನುಮತಿಯಿರುತ್ತದೆ.ಆನ್ಲೈನ್ ಸೇವಾ ಪೂರೈಕೆದಾರರಾದ ಸ್ವಿಗ್ಗಿ, ಝೊಮೇಟೋ ಇತ್ಯಾದಿ ಇವರಿಗೆ ಸೇವೆ ಒದಗಿಸಲು ಹೋಟೆಲ್ಗಳು ಮತ್ತು ರೆಸ್ಟೊರೆಂಟ್ಗಳ ಅಡಿಗೆ ಮನೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ.ಆನ್ಲೈನ್ಆಹಾರ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.
ಸಾರ್ವಜನಿಕರು ಜಿಲ್ಲಾಡಳಿತದಿಂದ ನೀಡಲಾಗುವ ನಿರ್ದೇಶನಗಳನ್ನು ಪಾಲಿಸಿ ಕೋವಿಡ್ -19 ನಿಯಂತ್ರಣಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.