ಮಂಜೇಶ್ವರ, ಮೇ 08 (DaijiworldNews/MS): ಕೋಟ್ಯಾಂತರ ರೂ. ಗಳ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಪ ಟ್ಟ೦ತೆ ಮಂಜೇಶ್ವರ ನಿವಾಸಿಯೋರ್ವನನ್ನು ಕಾಸರಗೋಡು ಡಿವೈಎಸ್’ಪಿ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಬಂಧಿತನನ್ನು ಮಂಜೇಶ್ವರ ಉದ್ಯಾವರದ ಮುಹಮ್ಮದ್ ಜಾವೇದ್ (28) ಎಂದು ಗುರುತಿಸಲಾಗಿದೆ.
ಫ್ರಿನ್ಸ್ ಗೋಲ್ಡ್ ಎಂಬ ಹೆಸರಿನಲ್ಲಿ ಮಲಪ್ಪುರಂ ನಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆ ಯ ಹೆಸರಿನಲ್ಲಿ ಮನಿ ಚೈನ್ ವಂಚನೆ ನಡೆಸಿತ್ತು. ಕೊಟ್ಯಾ೦ತರ ರೂ . ಗಳಷ್ಟು ವಂಚನೆ ಬೆಳಕಿಗೆ ಬಂದಿದೆ.
ಮಂಜೇಶ್ವರ , ಮಂಗಳೂರು , ಕಾಸರಗೋಡು , ಕಣ್ಣೂರು ಮೊದಲಾದೆಡೆಗಳ ಹಲವಾರು ಮಂದಿಯಿಂದ ಹಣ ಪಡೆದು ವಂಚನೆ ನಡೆಸಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.