ಮಂಗಳೂರು, ಮೇ 07 (DaijiworldNews/SM): ರಾಜ್ಯ ಸರಕಾರದಿಂದ ಮೇ 10ರಿಂದ ಮೇ 24ರ ತನಕ ಲಾಕ್ಡೌನ್ ಘೋಷಣೆ ಮಾಡಿ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶದಲ್ಲಿ ಬದಲಾವಣೆ ಇಲ್ಲ. ಮುಂದಿನ ಆದೇಶದ ತನಕ ದ.ಕ.ದಲ್ಲಿ ಈ ಹಿಂದೆ ಜಿಲ್ಲಾಡಳಿತ ನೀಡಿರುವ ನಿರ್ಬಂಧಗಳೇ ಜಿಲ್ಲೆಗೆ ಅನ್ವಯವಾಗಲಿದೆ ಎಂದು ಡಿಸಿ ಡಾ. ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ.
ಸದ್ಯ ಜಿಲ್ಲಾಡಳಿತ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸುತ್ತೇವೆ ಎಂಬುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸ್ಪಷ್ಟನೆ ನೀಡಿದ್ದಾರೆ.
ಹಾಗಾದರೆ, ಈ ಹಿಂದಿನ ಆದೇಶದಲ್ಲಿ ಏನೇನಿದೆ?
ಮುಂದಿನ ಆದೇಶದವರೆಗೆ ಯಾವುದೇ ಬದಲಾವಣೆ ಇರುವುದಿಲ್ಲ
ಬೆಳಗ್ಗೆ 6ರಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶ
ಬೆಳಗ್ಗೆ 10 ಗಂಟೆಯೊಳಗೆ ಎಲ್ಲರೂ ಮನೆ ಸೇರಬೇಕು
ಆ ಬಳಿಕ ಸಾರ್ವಜನಿಕರ ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ
ತುರ್ತು ಸಂದರ್ಭದಲ್ಲಿ ದಾಖಲೆಗಳಿದ್ದರೆ ಮಾತ್ರ ಸಂಚರಿಸಬಹುದು
ಮೇ 15ರಿಂದ ಮದುವೆ ನಡೆಸಲೂ ಕೂಡ ಅನುಮತಿ ನೀಡಲಾಗುವುದಿಲ್ಲ
ಈ ಹಿಂದಿನ ಆದೇಶದಲ್ಲಿ ಯಾವುದೇ ಬದಲಾವಣೆ ಸದ್ಯದಲ್ಲಿ ಇಲ್ಲ
ರಾಜ್ಯ ಸರಕಾರದ ಅನುಮತಿ ಪಡೆದು ಅದೇ ಆದೇಶವನ್ನು ಮುಂದುವರಿಸುತ್ತೇವೆ
ಮುಂದಿನ ಆದೇಶದವರೆಗೆ ಈ ಹಿಂದೆ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಆದೇಶವೇ ಮುಂದುವರಿಕೆ