ಮಂಗಳೂರು, ಮೇ 07 (DaijiworldNews/SM): ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದು, ಅದರಂತೆ ಶನಿವಾರ ಹಾಗೂ ರವಿವಾರದಂದು ವಾರಂತ್ಯ ಕರ್ಫ್ಯೂ ಜಾರಿಯಲ್ಲಿದೆ.
ವಾರಾಂತ್ಯದ ಕಫ್ರ್ಯೂ ಸಂದರ್ಭದಲ್ಲಿ ನಂದಿನಿ ಹಾಲಿನ ಬೂತ್ ಗಳು, ದಿನ ಪತ್ರಿಕೆಗಳು ಮತ್ತು ಜಿಲ್ಲೆಯಲ್ಲಿನ ಹಾಪ್ಕಾಮ್ಸ್ ಗಳಿಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಕಾರ್ಯಾಚರಿಸಲು ಅನುಮತಿಯಿರುತ್ತದೆ.
ಆನ್ಲೈನ್ ಸೇವಾ ಪೂರೈಕೆದಾರರಾದ ಸ್ವಿಗ್ಗಿ, ಝೊಮೇಟೋ ಇತ್ಯಾದಿ ಸೇವೆ ಒದಗಿಸಲು ಹೋಟೆಲ್ಗಳು ಮತ್ತು ರೆಸ್ಟೊರೆಂಟ್ಗಳ ಅಡಿಗೆಮನೆಗಳನ್ನು ನಿರ್ವಹಿಸಲು ಅನುಮತಿ ನೀಡಲಾಗಿದೆ. ಆನ್ಲೈನ್ಆಹಾರ ಸೇವಾ ಪೂರೈಕೆದಾರರಿಗೆ ರಾತ್ರಿ 11 ಗಂಟೆಯವರೆಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.
ಸಾರ್ವಜನಿಕರು ಜಿಲ್ಲಾಡಳಿತದಿಂದ ನೀಡಲಾಗುವ ನಿರ್ದೇಶನಗಳನ್ನು ಪಾಲಿಸಿ ಕೋವಿಡ್ -19 ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.