ಮಂಗಳೂರು, ಮೇ 07 (DaijiworldNews/MB) : "ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ದೇಶವು ಹಲವು ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ, ಸಾಮಾನ್ಯ ಜನರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಆದರೆ, ಸಂಸದ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಂಗ್ ಹಗರಣ ಕೋಮು ಬಣ್ಣ ಬಳಿಯುವ ಮೂಲಕ ತಮ್ಮ ಒಡೆದು ಆಳುವ ಕೋಮು ಮನಸ್ಥಿತಿಯನ್ನು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ'' ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದ್ದಾರೆ.
ಮೇ 07 ರ ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಸಂಸದ ತೇಜಸ್ವಿ ಸೂರ್ಯ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ, ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲೂ ಕೋಮುವಾದಿ ಮಾರ್ಗ ಹಿಡಿದು ಬಿಬಿಎಂಪಿ ವಾರ್ ರೂಂ ನ ಒಂದೇ ಧರ್ಮಕ್ಕೆ ಸೇರಿದ 17 ಸಿಬ್ಬಂದಿಗಳ ಹೆಸರುಗಳನ್ನು ಮಾತ್ರ ಓದಿದ್ದಾರೆ. ಹಾಸಿಗೆ ಬ್ಲಾಕಿಂಗ್ನಲ್ಲಿ ತೊಡಿಗಿರುವ ಆರೋಪ ಹೊತ್ತಿರುವ ಶಾಸಕ ಸತೀಶ್ ರೆಡ್ಡಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿರುವುದು ರಾಷ್ಟ್ರ ವಿರೋಧಿ ಚಟುವಟಿಕೆ'' ಎಂದು ಆರೋಪಿಸಿದರು.
"ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಜನರು ಲಾಕ್ಡೌನ್ ಹೆಸರಿನಲ್ಲಿ ಮೂರ್ಖರಾಗುತ್ತಿದ್ದಾರೆ. ದೇಶವು ಆರ್ಥಿಕ ಅಸ್ಥಿರತೆಯನ್ನು ಎದುರಿಸುತ್ತಿದೆ. ನೆಹರೂವಿನ ಪಂಚವಾರ್ಷಿಕ ಯೋಜನೆಗಳು, ಇಂದಿರಾ ಗಾಂಧಿಯ ಬ್ಯಾಂಕುಗಳ ರಾಷ್ಟ್ರೀಕರಣ ನೀತಿಯು ದೇಶದ ಆರ್ಥಿಕತೆಯನ್ನು ಬಲವಾಗಿಸಿತು. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರು 80 ಕೋಟಿ ಸಾವಿರ ರೈತರ ಸಾಲವನ್ನು ಮನ್ನಾ ಮಾಡಿದ್ದರು'' ಎಂದು ಕೂಡಾ ಅವರು ಈ ವೇಳೆಯೇ ಹೇಳಿದರು.
ತೇಜಸ್ವಿ ಸೂರ್ಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: ಮಿಥುನ್ ರೈ
''ಸಮಾಜದ ಕೋಮು ಸೌಹಾರ್ದತೆಗೆ ಭಂಗ ತರುವ ಹೇಳಿಕೆ ನೀಡಿದ ತೇಜಸ್ವಿ ಸೂರ್ಯ ವಿರುದ್ಧ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಬೇಕು'' ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಆಗ್ರಹಿಸಿದರು.
ಅಲ್ಲದೆ, ''ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸತೀಶ್ ರೆಡ್ಡಿ ವಿರುದ್ಧ ಕ್ರಿಮಿನಲ್ ಆರೋಪದಡಿ ಪ್ರಕರಣ ದಾಖಲಿಸಬೇಕು'' ಎಂದೂ ಒತ್ತಾಯಿಸಿದ್ದಾರೆ.
''ಸರ್ಕಾರ ಅಥವಾ ಜಿಲ್ಲಾಡಳಿತ ಲಾಕ್ಡೌನ್ ಮಾಡಲು ಬಯಸಿದೆ, ಅದು ಬಡವರ ಮನೆಗಳಿಗೆ ಅಗತ್ಯ ಸರಕುಗಳನ್ನು ಒದಗಿಸಬೇಕು'' ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಮಹಾಬಲ ಮಾರ್ಲ, ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯರಾಜ್ ಮತ್ತು ಇತರರು ಉಪಸ್ಥಿತರಿದ್ದರು.