ಮಂಗಳೂರು, ಮೇ 07 (DaijiworldNews/MB) : ಲಾಕ್ಡೌನ್ ಸಂದರ್ಭ ಜಿಲ್ಲಾಡಳಿತವು ಕಠಿಣ ನಿಯಮ ಜಾರಿಗೆ ತಂದಿದೆ. ಈ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದಾರೆ, ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಅವರು ಮೇ 7 ರ ಶುಕ್ರವಾರ ಕುಲಾಯಿ ಚೆಕ್ಪೋಸ್ಟ್ನಲ್ಲಿ ಪೊಲೀಸ್ ತಂಡದೊಂದಿಗೆ ರೌಂಡ್ಸ್ ನಡೆಸಿದರು.
ಗುರುವಾರ ಜಿಲ್ಲಾಡಳಿತವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅಗತ್ಯ ವಸ್ತುಗಳ ಖರೀದಿಗೆ ನೀಡಲಾಗುವ ಸಮಯವನ್ನು ಒಂದು ಗಂಟೆ ಕಡಿತಗೊಳಿಸಿದೆ. ಈ ಹಿನ್ನೆಲೆ ಈಗ ಬೆಳಿಗ್ಗೆ 6 ರಿಂದ 9 ರವರೆಗೆ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ ಹಾಗೂ ವೀಕೆಂಡ್ ಕರ್ಫ್ಯೂ ಅನ್ನು ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ವಿಧಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಅನಗತ್ಯವಾಗಿ ಚಲಿಸುತ್ತಿರುವವರ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.
ಪೊಲೀಸ್ ಆಯುಕ್ತರು ಚೆಕ್ಪೋಸ್ಟ್ ಸಮೀಪದಲ್ಲಿ ರೌಂಡ್ಸ್ ಕೈಗೊಂಡ ವೇಳೆ, ಹಲವು ದ್ವಿಚಕ್ರ ವಾಹನಗಳು ಮತ್ತು ಕಾರುಗಳು ರಸ್ತೆಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿರುವುದು ಅವರ ಗಮನಕ್ಕೆ ಬಂದಿದೆ.
ಇನ್ನು ಕೆಲವು ವಾಹನಗಳಲ್ಲಿ ಅಗತ್ಯ ವಸ್ತುಗಳು ಎಂಬಂತೆ ಟ್ಯಾಗ್ಗಳನ್ನು ಹಾಕಲಾಗಿದ್ದು ಪರಿಶೀಲನೆ ವೇಳೆ ಆ ವಾಹನದಲ್ಲಿ ಅನಗತ್ಯ ಟ್ಯಾಗ್ ಹಾಕಲಾಗಿದೆ ಎಂದು ತಿಳಿದ ಬಳಿಕ ಎಚ್ಚರಿಕೆ ನೀಡಿ ಟ್ಯಾಗ್ ಹೊರತೆಗೆಯಲಾಗಿದೆ. ಇನ್ನು ಕೆಲವು ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.