ಮಂಗಳೂರು, ಮೇ 07 (DaijiworldNews/MS): ನಗರದ ಪದವಿನಂಗಡಿ ಬಳಿ ಮೇ. 7ರ ಶುಕ್ರವಾರ ನಿಯಂತ್ರಣ ತಪ್ಪಿದ ಎರಡು ಬೈಕ್ಗಳು ಢಿಕ್ಕಿ ಹೊಡೆದ ಭೀಕರ ರಸ್ತೆ ಅಪಘಾತ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಬೊಂದೆಲ್, ಕೃಷ ನಗರ ದ ನಿವಾಸಿ ಪ್ರಶಾಂತ್ ಸನತ್ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಘಟನೆಯ ವಿವರ:
ಸಂಚಾರಿ ನಿಯಮ ಉಲ್ಲಂಘಿಸಿ ಒವ್ ವೇಯಲ್ಲಿ ಸ್ಕೂಟಿ ಸವಾರನೊಬ್ಬ ರಸ್ತೆ ಕ್ರಾಸ್ ಮಾಡಲು ಯತ್ನಿಸಿದ್ದು , ಇದನ್ನು ತಪ್ಪಿಸಲೆತ್ನಿಸಿದ ಬೋಂದೆಲ್ ನಿಂದ ಕೆಪಿಟಿಸಿ ವೇಗವಾಗಿ ಬರುತ್ತಿದ್ದ ಬೈಕ್ ಸವಾರನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಅಂಗಡಿಗೆ ಢಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಎತ್ತರಕ್ಕೆ ಎಸೆದಂತಾಗಿ ರಸ್ತೆಗಪ್ಪಳಿಸಿದ್ದಾನೆ . ಮಾತ್ರವಲ್ಲದೆ ಈತನ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಡಿದಿದೆ.
ಈ ಎಲ್ಲಾ ಭೀಕರ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.