ಕಾರ್ಕಳ, ಮೇ 06 (DaijiworldNews/SM): ಗುರುವಾರ ಸಂಜೆ ಸುರಿದ ಭಾರೀ ಮಳೆ, ಬಿರುಗಾಳಿಗೆ ನಗರದ ರಥಬೀದಿಯ ಕಟ್ಟಡವೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಅಲ್ಲದೆ, ಪಕ್ಕದ ಕಟ್ಟಡದ ಬದಿಯಲ್ಲಿ ಸಿಲುಕಿರುವುದರಿಂದ ಭಾರೀ ಅನಾಹುತ ತಪ್ಪಿದೆ.
ಈ ಘಟನೆಯಿಂದ ಸುಮಾರು ರೂ.20 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ. ಗಾಂಧಿಮೈದಾನದ ಪರಿಸರದಲ್ಲಿ ಮರ ಧರೆಶಾಹಿಯಾಗಿ ವಿದ್ಯುತ್ ಕಂಬಗಳು ಮುರಿದುಕೊಂಡಿದೆ. ಇದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಕಂಡಿದೆ. ಗಾಂಧಿ ಮೈದಾನ ಪರಿಸರದ ನಿವಾಸಿ ಗ್ರೇಸಿ ಅವರ ಮನೆಯ ಮೇಲ್ಛಾವಣೆಗೆ ಅಳವಡಿಸಿದ ಶೀಟ್ ಹಾರಿ ಹೋಗಿ ಸುಮಾರು 40,000 ರೂಪಾಯಿ ನಷ್ಟ ಸಂಭವಿಸಿದೆ.