ಪಡಂಗಡಿ, ಮೇ 06 (DaijiworldNews/MS): ಪಲ್ಗುಣಿ ನದಿಯ ಮಾಂತ್ರಾಯಿ ಗುಂಡಿ ಎಂಬಲ್ಲಿ ಗೆಳೆಯರೊಂದಿಗೆ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮೇ.6 ರ ಗುರುವಾರ ನಡೆದಿದೆ. ಮೃತ ಯವಕನನ್ನು ಕಾರ್ಯಾಣ ದುಗ್ಗಪ್ಪ ಎಂಬವರ ಮಗ ನಿಶಾಂತ್ (22) ಎಂದು ಗುರುತಿಸಲಾಗಿದೆ.
ನಿಶಾಂತ್ ಹಾಗೂ ಇತರ 5 ಜನ ಸ್ನೇಹಿತರು ಸ್ಥಳೀಯ ಹೊಳೆಯಲ್ಲಿ ಈಜಲು ಹೋಗಿದ್ದರು .ಆದರೆ ನಿಶಾಂತ್ ನನ್ನು ಸರಿಯಾಗಿ ಈಜಾಲು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾರೆ.
ಈ ವೇಳೆ ಸ್ನೇಹಿತರು ನಿಶಾಂತ್ ನನ್ನು ಉಳಿಸುವ ಪ್ರಯತ್ನ ನಡೆಸಿದ್ದು, ದಡಕ್ಕೆತ್ತಿ ತಂದು ಸ್ಥಳಕ್ಕೆ ಅಂಬುಲೆನ್ಸ್ ತರಿಸಿಕೊಂಡಿದ್ದಾರೆ. ಆದರೆ ದುರಾದೃಷ್ಟವಶಾತ್ ಅದಾಗಲೇ ನಿಶಾಂತ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಭೇಟಿ ನೀಡಿದ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಬಳಂಜ ವಾಲಿಬಾಲ್ ಕ್ಲಬ್ ನ ಸದಸ್ಯರಾಗಿದ್ದರು.