ಬೈಂದೂರು, ಮೇ 06 (DaijiworldNews/MS): ಕಿರಿಮಂಜೇಶ್ವರ ಕೊಡೇರಿ ಗ್ರಾಮದಲ್ಲಿ ಮನೆಯವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರು ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಆಗಿದ್ದರು.
ಈ ಕಾರಣದಿಂದ ಮನೆಯಲ್ಲಿದ್ದ ಬಾಲಕಿ ತನ್ವಿತಾ(12) ಎಲ್ಲರೊಂದಿಗೆ ಹತ್ತಿರದ ಸಂಪರ್ಕ ಮಾಡದಂತೆ ಮನೆಯಿಂದ ಹೊರಗಡೆ ಹೋಗದಂತೆ ಹಾಗೂ ಮನೆಯಲ್ಲಿರುವ ಚಿಕ್ಕ ಮಗುವನ್ನು ಎತ್ತಿಕೊಳ್ಳಲ್ಲದಂತೆ ತಿಳಿಸಿದ್ದರು.
ಇದರಿಂದ ಮನನೊಂದ ಆಕೆ ಮೇ. 4 ರಂದು ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821