ಮಂಗಳೂರು, ಮೇ.05 (DaijiworldNews/PY): ಕೊರೊನಾ ಸಂಕಷ್ಟದ ವೇಳೆ ಭಾರತಕ್ಕೆ ಬಹರೈನ್ನಿಂದ 40 ಮೆಟ್ರಿಕ್ ಟನ್ ಆಮ್ಲಜನಕ ಬುಧವಾರ ನವ ಮಂಗಳೂರು ಬಂದರಿಗೆ ತಲುಪಿದೆ.
ಬಹರೈನ್ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್ಗಳಲ್ಲಿ ಸುಮಾರು 40 ಮೆಟ್ರಿಕ್ ಟನ್ ಆಮ್ಲಜನಕ ಹೊತ್ತ ಭಾರತದ ನೌಕಾಸೇನಾ ಹಡಗು ಐಎನ್ಎಸ್ ತಲ್ವಾರ್ ಮಂಗಳೂರು ಬಂದರಿಗೆ ತಲುಪಿದೆ.
"20 ಮೆಟ್ರಿಕ್ ಟನ್ಗಳ ಎರಡು ಪ್ರತ್ಯೇಕ ಕ್ರಯೋಜೆನಿಕ್ ಕಂಟೇನರ್ಗಳನ್ನು ತುಂಬಿರುವ ಆಮ್ಲಜನಕವನ್ನು ಉಚಿತವಾಗಿ ನಿರ್ವಹಣೆ ಮಾಡಬೇಕು" ಎಂದು ಎನ್ಎಂಪಿಟಿಗೆ ಕೇಂದ್ರ ಸೂಚಿಸಿದೆ.
"ಕೊರೊನಾ ಸಂಕಷ್ಟದಿಂದ ಪಾರಾಗಲು ಬಹರೈನ್ ಸರ್ಕಾರವು ಈ ಆಕ್ಸಿಜನ್ ಅನ್ನು ಭಾರತೀಯ ರೆಡ್ಕ್ರಾಸ್ ಸೊಸೈಟಿಗೆ ನೀಡಿದೆ' ಎಂದು ಎನ್ಎಂಪಿಟಿ ಹೇಳಿದೆ.