ಉಡುಪಿ, ಮೇ 05 (DaijiworldNews/MS): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇರುತ್ತೋ ಅಷ್ಟೇ ಜವಾಬ್ದಾರಿ ವಿರೋಧ ಪಕ್ಷಕ್ಕೂ ಇರುತ್ತದೆ. ಎಲ್ಲದಕ್ಕೂ ಕೇವಲ ಮುಖ್ಯಮಂತ್ರಿಗಳ ರಾಜೀನಾಮೆ ಒಂದೇ ಪರಿಹಾರ ಅಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಅವರು ಸಿಎಂ ರಾಜೀನಾಮೆಯ ಒತ್ತಾಯಕ್ಕೆ ಉಡುಪಿಯಲ್ಲಿ ಇಂದು ತಿರುಗೇಟು ನೀಡಿದರು.
"ಕೋವಿಡ್ ನಿರ್ವಹಣೆಯಲ್ಲಿ ವಿರೋಧ ಪಕ್ಷ ಸಲಹೆ ಕೊಡಬಹುದು ಮಾಜಿ ಮುಖ್ಯ ಮಂತ್ರಿ ಯಾಗಿ ಅವರಿಗೂ ಅಧಿಕಾರ ಇದೆ. ಈ ಹಿಂದೆ ಅವರದೇ ಸರಕಾರ ಇರುವಾಗ ಬಿಟ್ಟು ಹೋದ ಕೆಟ್ಟ ವ್ಯವಸ್ಥೆಯಿಂದ ಈ ಪರಿಸ್ಥಿತಿ ಎದುರಾಗಿದೆ. ಜನಸಂಖ್ಯೆ ಅನುಗುಣವಾಗಿ ಯಾವ ಆಸ್ಪತ್ರೆ ಯನ್ನು ಮೇಲ್ದರ್ಜೆಗೇರಿಸಿಲ್ಲ. ಅದರಿಂದ ಈ ಸ್ಥಿತಿ ಎದುರಾಗಿದೆ ಎಂದು ಅವರು ಒಪ್ಪಿಕೊಳ್ಳಬೇಕು" ಎಂದು ಹೇಳಿದರು.
ಬೆಡ್ ಬ್ಲಾಕಿಂಗ್ ವಿಚಾರಕ್ಕೆ ಉತ್ತರಿಸಿ, " ಈ ಕೋವಿಡ್ ತುರ್ತುಪರಿಸ್ಥಿತಿಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿರುವವರು ಮನುಷ್ಯರಲ್ಲ. ರಾಕ್ಷಸರುಈ ಕೆಲಸವನ್ನು ಮಾನವೀಯತೆ ಇಲ್ಲದವರು ಸರಕಾರಿ ವ್ಯವಸ್ಥೆ ಒಳಗೆ ನುಗ್ಗಿ ಸರಿಯಾಗಿ ಕೆಲಸ ಮಾಡಿದಾರೆ. ಇದು ವ್ಯವಸ್ಥಿತ ಜಾಲ. ಆ ತಪ್ಪನ್ನು ಯಾರೇ ಮಾಡಿದ್ದರೂ 307 ಕೇಸು ದಾಖಲಿಸಿ ಶಾಶ್ವತವಾಗಿ ಜೈಲಿನಲ್ಲಿರುವಂತೆ ಮಾಡಬೇಕು. ಆಗಲೇ ಸರಕಾರ ತಕ್ಷಣ ಕ್ರಮಕೈಗೊಂಡು ಉಗ್ರ ಶಿಕ್ಷೆ ಕೊಡಬೇಕು.ತಕ್ಷಣ ಆ ಕಂಪನಿಯನ್ನು ಬರ್ಖಾಸ್ತು ಮಾಡಬೇಕು, ಎಂದು ಆಗ್ರಹಿಸಿದರು.
ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಮುಖ್ಯಮಂತ್ರಿಯಾಗಲು ಯಾವುದೇ ನೈತಿಕ ಹಕ್ಕಿಲ್ಲ. ಅವರ ಕ್ಷೇತ್ರದಲ್ಲಿ ಸೋತು ಹತಾಶರಾಗಿದ್ದಾರೆ. ಚುನಾವಣೆ ಗೆದ್ದ ನಂತರ ಅಶಾಂತಿ ಕೆಲಸ ನಡೆಯುತ್ತಿದೆ. ಪಶ್ಚಿಮ ಬಂಗಾಳ ದಲ್ಲಿ ಚುನಾವಣೆ ಗೆದ್ದ ನಂತರವಂತೂ ಮತೀಯ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಒಂದು ಕೋಮುವಿನ ಜನರನ್ನು ಕೊಲ್ಲುವುದು ಮತ್ತು ಗೂಂಡಾಗಿರಿ ಶುರು ಮಾಡಿದ್ದಾರೆ. ಬಿಜೆಪಿ ಕಛೇರಿಗೇ ಬೆಂಕಿ ಹಚ್ಚಿ ಕೃತ್ಯ ಎಸಗಿದ್ದಾರೆ. ಈ ರೀತಿ ಹಿಂದೆ ಇಂತಹ ಘಟನೆ ಎಲ್ಲೂ ಕಂಡಿಲ್ಲ ಎಂದು ಸಂಸದೆ ಶೋಭಾ ಆರೋಪಿಸಿದರು.
ಹೆಚ್ಚು ತ್ತಿರುವ ಆಕ್ಸಿಜನ್ ಬೇಡಿಕೆ ಮತ್ತು ಸೌಕರ್ಯ ಬಗ್ಗೆ ವಿವರಿಸುತ್ತಾ, ' ಈ ಕೊರೋನಾ ಮುಂದಿನ ದಿನಗಳಲ್ಲಿ 4 ಪಟ್ಡು ಬರಬಹುದು. ಅದಕ್ಕಾಗಿ ಕಳೆದ ಬಾರಿಯಂತೆ ಹಾಸ್ಟೆಲ್ ಮತ್ತು ಹಳೆ ಕಾಲೇಜು, ಶಿಕ್ಷಣ ಸಂಸ್ಥೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲು ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಕಡಿಮೆ ರಿಸ್ಕ್ ಇರುವವರು ಮನೆಯಲ್ಲಿ ವ್ಯವಸ್ಥೆ ಇಲ್ಲದವರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ಬೇರೆ ಬೇರೆ ಆಸ್ಪತ್ರೆಗಳಲ್ಲಿ ಇಂಡಸ್ಟ್ರಿ ಗಳಲ್ಲಿ ಉತ್ಪಾದನೆ ಆಗುತ್ತಿದೆ. ಕೆಲವು ಭಾಗದಲ್ಲಿ ದುರುಪಯೋಗ ಆದ ಕಾರಣ ರೋಗಿಗಳಿಗೆ ತೊಂದರೆ ಆಗಿದೆ. ನಮ್ಮ ಜಿಲ್ಲೆಗೆ ಅಗತ್ಯ ಇರುವ ಆಕ್ಸಿಜನ್ ನ್ನು ಅಗತ್ಯ ಬಿದ್ದಾಗ ಬೇರೆಡೆಯಿಂದ ತರಿಸುವ ಕೆಲಸ ಜಿಲ್ಲಾಡಳಿತ ಮಾಡುತ್ತಿದೆ. ಚಾಮರಾಜನಗರದಲ್ಲಾದ ದುರಂತದ ನಂತರ ಸರಕಾರ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದೆ. ಆಕ್ಸಿಜನ್ ಕೊರತೆ ಇದ್ದಾಗ ಪರಸ್ಪರ ಜಿಲ್ಲೆಗಳು ಕೋ ಆರ್ಡಿನೇಟ್ ಮಾಡಿ ಕೊರೊನಾ ವಿರುದ್ದ ಹೋರಾಡಬೇಕು ಎಂದು ಸಂಸದೆ ಹೇಳಿದರು.