ಮಂಗಳೂರು, ಮೇ.05 (DaijiworldNews/PY): ರಸ್ತೆ ದಾಟುತ್ತಿದ್ದ ಸಂದರ್ಭ ಆಟೋ ರಿಕ್ಷಾ ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಮುಡಿಪು ಜಂಕ್ಷನ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಚಂದ್ರಶೇಖರ್ (58) ಎಂದು ಗುರುತಿಸಲಾಗಿದೆ.
ಮೇ 3ರ ಸೋಮವಾರದಂದು ಚಂದ್ರಶೇಖರ್ ಅವರು ಕೆಲಸ ಮುಗಿಸಿ ಸಂಜೆ 7 ಗಂಟೆಗೆ ಮುಡಿಪು ಜಂಕ್ಷನ್ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭ ಮುಡಿಪು ಕಡೆಯಿಂದ ಬಾಳೆಪುಣಿ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ಪರಿಣಾಮ ಚಂದ್ರಶೇಖರ್ ಅವರ ಬಲಕೈಯ ಮೊಣಕೈಗೆ, ಹಣೆಯ ಎಡಬದಿಗೆ, ಎಡಗೈ ಮೊಣಕೈಗೆ, ಎರಡು ಕಾಲುಗಳ ಮೊಣಗಂಟಿಗೆ, ಬಲಗಾಲಿನ ಪಾದಕ್ಕೆ ಹಾಗೂ ತಲೆ ಹಿಂಬದಿಗೆ ತೀವ್ರವಾದ ಗಾಯಗಳಾಗಿದ್ದವು.
ಅವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ.