ಮಂಗಳೂರು, ಮೇ 05 (DaijiworldNews/MS): ದೇಶದ ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಆಪರೇಷನ್ ಸಮುದ್ರ ಸೇತು- 2 ಆರಂಭಿಸಿದೆ. ಬೇರೆ ಬೇರೆ ದೇಶಗಳಿಂದ ನೌಕಾಪಡೆಯ ಏಳು ಹಡಗುಗಳು ಆಕ್ಸಿಜನ್ ತುಂಬಿದ ಟ್ಯಾಂಕ್ ಗಳನ್ನು ಹಾಗೂ ಇತರ ವೈದ್ಯಕೀಯ ಅಗತ್ಯಗಳನ್ನು ಹೊತ್ತು ತರಲಿದೆ.
ಇದರ ಅಂಗವಾಗಿ ಬಹ್ರೈನ್ ನಿಂದ 40 ಮೆ. ಟನ್ ಆಮ್ಲಜನಕ್ ಹೊತ್ತು ಹೊರಟಿರುವ ನೌಕಾಪಡೆಯ ಐಎನ್ ಎಸ್ ತಲ್ವಾರ್ ಹಡಗು ಬುಧವಾರ ಮದ್ಯಾಹ್ನ ಮಂಗಳೂರು ಬಂದರಿಗೆ ಆಗಮಿಸುವ ನಿರೀಕ್ಷೆ ಇದೆ.
ಬಹ್ರೈನ್ ನ ಮನಾಮಾ ಬಂದರಿನಿಂದ ಈ ಹಡಗು ಹೊರಟಿದ್ದು, ಎರಡು ಕ್ರಯೋಜನಿಕ್ ಐಸೋ ಕಂಟೈನರ್ಗಳಲ್ಲಿ 40 ಮೆ. ಟನ್ ಆಮ್ಲಜನಕ ಇದೆ
ಕೊವೀಡ್ ಚಿಕಿತ್ಸೆಯಲ್ಲಿ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳೂ ಈ ಹಡಗಿನಲ್ಲಿವೆ. ಕರ್ನಾಟಕದ ಬೇಡಿಕೆಗೆ ಅನುಗುಣವಾಗಿ ಈ ಆಮ್ಲಜನಕವನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ.