ಮಂಗಳೂರು, ಮೇ.04 (DaijiworldNews/HR): ಮುಂಬರುವ ದಿನಗಳಲ್ಲಿ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಅಲ್ಲಿನ ಆಕ್ಸಿಜನ್ ಕೇಂದ್ರಗಳನ್ನು ಕೇರಳ ಸರಕಾರ ಸ್ವಾಧೀನ ಪಡಿಸಿಕೊಂಡರೆ ನಮಗೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆ ಏನೆಂಬುದನ್ನು ಸರಕಾರ ತಿಳಿಸಬೇಕು" ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಲ್ಲಾ ಆಸ್ಪತ್ರೆಗಳ ವೆಂಟಿಲೇಟರ್, ಐಸಿಯುಗಳು ಸಂಪೂರ್ಣವಾಗಿ ಉಪಯೋಗ ಆದಾಗ ಎಷ್ಟು ಆಕ್ಸಿಜನ್ ಅಗತ್ಯವಿದೆ ಮತ್ತು ದಿನನಿತ್ಯ ಎಷ್ಟು ಪೂರೈಕೆ ಆಗುತ್ತಿದೆ, ಎಷ್ಟು ಆಕ್ಸಿಜನ್ ಬರುತ್ತಿದೆ, ಎಷ್ಟು ಅಗತ್ಯವಿದೆ ಎಂಬ ಬಗ್ಗೆ ಶಾಸಕರಿಗೂ ಮಾಹಿತಿ ಇಲ್ಲ. ಹಾಗಾಗಿ ಈ ಬಗ್ಗೆ ರಾಜ್ಯ ಸರಕಾರ ಶ್ವೇತ ಪತ್ರದ ಮೂಲಕ ಗೊಂದಲವನ್ನು ನಿವಾರಿಸಬೇಕು" ಎಂದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭ್ಯವಿರುವ ಎಲ್ಲಾ ವೆಂಟಿಲೇಟರ್, ಆಕ್ಸಿಜನ್ ಏಕಕಾಲದಲ್ಲಿ ಉಪಯೋಗವಾದಾಗ ಎಷ್ಟು ಆಕ್ಸಿಜನ್ ಅಗತ್ಯವಿದೆ ಮತ್ತು ಎಷ್ಟು ಪೂರೈಕೆಯಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದ್ದು, ನನ್ನ ಮಾಹಿತಿಯ ಪ್ರಕಾರ ಜಿಂದಾಲ್ ಕಂಪನಿಯಿಂದ ಶೇ. 80ರಷ್ಟು ಹಾಗೂ ಪಾಲ್ಘಾಟ್ನಿಂದ ಶೇ. 20ರಷ್ಟು ಲಿಕ್ವಿಡ್ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕೇರಳದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದರೆ ಅಲ್ಲಿನ ಆಕ್ಸಿಜನ್ ಕೇಂದ್ರಗಳನ್ನು ಕೇರಳ ಸರಕಾರ ಸ್ವಾಧೀನ ಪಡಿಸಿಕೊಂಡರೆ ನಮಗೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಅದಕ್ಕೆ ಪರ್ಯಾಯ ವ್ಯವಸ್ಥೆ ಏನೆಂಬುದನ್ನು ಸರಕಾರ ತಿಳಿಸಬೇಕು" ಎಂದಿದ್ದಾರೆ.
ಕೇರಳ ಸರ್ಕಾರದೊಂದಿಗೆ ರಾಜ್ಯ ಸರಕಾರ ಮಾತನಾಡಿ ಮಂಗಳೂರಿಗೆ ಬರುವ ಆಕ್ಸಿಜನ್ ಕಡಿತಗೊಳಿಸದಂತೆ ಅಲ್ಲಿನ ಕಂಪನಿಗಳಿಗೆ ಕೇರಳ ಸರಕಾರ ಆದೇಶ ಮಾಡುವತೆ ಮನವಿ ಮಾಡಬೇಕು, ಜೊತೆಗೆ ಕೇಂದ್ರ ಸರಕಾರದ ಮೂಲಕ ಜಿಂದಾಲ್ ಕಂಪನಿಯಿಂದ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು" ಎಂದರು.
ಇನ್ನು ತಮಿಳುನಾಡಿನ ರಾಜಕೀಯ ಶಕ್ತಿಗಳು ಕೇಂದ್ರದ ಮೂಲಕ ಒತ್ತಡ ಹೇರಿ ಜಿಂದಾಲ್ ಮೂಲಕ ತಮ್ಮ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್ ಪೂರೈಕೆಗೆ ಸಾಧ್ಯವಾಗುವುದಾದರೆ ನಮ್ಮ ರಾಜ್ಯಕ್ಕೂ ಅದು ಆಗಬೇಕು. ನಮ್ಮ ಸಂಸದರು ಮತ್ತು ಸರಕಾರ ಈ ಬಗ್ಗೆ ಒತ್ತಡ ಹೇರಬೇಕು ಎಂದು ಅವರು ಹೇಳಿದರು..