ಉಡುಪಿ, ಮೇ 04 (DaijiworldNews/MB) : ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿದ್ದ ವ್ಯಾಕ್ಸಿನೇಶನ್ ಸೆಂಟರ್ ನಾಳೆ ಸೈಂಟ್ ಸಿಸಲೀಸ್ ಆಸ್ಪತ್ರೆಗೆ ಶಿಫ್ಟ್ ಆಗಲಿದೆ. ಸುಲಲಿತ ವ್ಯವಸ್ಥೆ ಉದ್ದೇಶದಿಂದ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಕಾನ್ವೆಂಟ್ ಶಾಲೆಗೆ ಸ್ಥಳಾಂತರ ಮಾಡಲಾಗುತ್ತಿದೆ.
ಈ ಬಗ್ಗೆ ಉಡುಪಿ ಸರ್ಜನ್ ಡಾ. ಮಧುಸೂಧನ್ ನಾಯಕ್ ಮಾಹಿತಿ ನೀಡಿದ್ದು, ''ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿದ್ದ ವ್ಯಾಕ್ಸಿನೇಶನ್ ಸೆಂಟರ್ ನಾಳೆ ಸೈಂಟ್ ಸಿಸಲೀಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಆದ್ದರಿಂದ ವ್ಯಾಕ್ಸಿನ್ ಪಡೆದುಕೊಳ್ಳಲು ನಾಳೆ ಉಡುಪಿ ಜಿಲ್ಲಾಸ್ಪತ್ರೆಗೆ ಯಾರು ಬರಬೇಡಿ'' ಎಂದು ತಿಳಿಸಿದ್ದಾರೆ.
''ವ್ಯಾಕ್ಸಿನ್ ಸೆಂಟರನ್ನು ಸೈಟ್ ಸಿಸಿಲೀಸ್ ಶಾಲೆಗೆ ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 8:30 ಟೋಕನ್ ನೀಡಲು ಆರಂಭ ಮಾಡುತ್ತೇವೆ. ಬೆಳಗ್ಗೆ 9.30 ಕ್ಕೆ ಎಂದಿನಂತೆ ವ್ಯಾಕ್ಸಿನೇಶನ್ ಆರಂಭವಾಗುತ್ತದೆ'' ಎಂದು ಕೂಡಾ ಮಾಹಿತಿ ನೀಡಿದ್ದಾರೆ.
''ಕೊರೊನಾ ಆಸ್ಪತ್ರೆಯಿಂದ ಸಾರ್ವಜನಿಕರು ಅಂತರ ಕಾಪಾಡುವುದು ಉತ್ತಮ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದೆ'' ಎಂದು ಮಧುಸೂಧನ್ ನಾಯಕ್ ತಿಳಿಸಿದ್ದಾರೆ.