ಮಂಗಳೂರು, ಮೇ 4 (DaijiworldNews/MS): ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ದಿನದಿಂದ ದಿನಕ್ಕೆ ಆಮ್ಲಜನಕ ಬೇಡಿಕೆಯೂ ಏಕಾಏಕಿ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ ದ.ಕ. ಜಿಲ್ಲೆಗೆ ಕಚ್ಚಾವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಜಿಲ್ಲಾಡಳಿತಕ್ಕೂ ಸವಾಲಾಗಿ ಪರಿಣಮಿಸಿದೆ.
ದ.ಕ. ಜಿಲ್ಲೆಯಲ್ಲಿ ಮೂರು ಅಕ್ಸಿಜನ್ ತಯಾರಿಕಾ ಘಟಕಗಳಿದ್ದೂ, ಸದ್ಯ ಕೈಗಾರಿಕಾ ಬಳಕೆ ಗೆ ಬೇಕಾಗಿದ್ದ ಆಕ್ಸಿಜನ್ ಸ್ಥಗಿತಗೊಳಿಸಲಾಗಿದ್ದು, ಕೇವಲ ಅಗತ್ಯ ಆಹಾರ ವಸ್ತುಗಳ ಉತ್ಪಾದನೆಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಮೂರು ಘಟಕಗಳ ಪೈಕಿ ಒಂದು ಪಾಲಕ್ಕಾಡ್ ನಿಂದ ರಿಫಿಲ್ಲಿಂಗ್ ಮಾಡುವ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಘಟಕ ಹಾಗೂ ನ್ಯಾಚುರಲ್ ಏರ್ ಅನ್ನು ಕಂಪ್ರೆಸ್ ಮಾಡಿ ಪ್ರತ್ಯೇಕಿಸಿ ಆಕ್ಸಿಜನ್ ತಯಾರಿಸುವ ಮತ್ತು ರಿಫಿಲ್ಲಿಂಗ್ ಮಾಡುವ ಘಟಕ ಕಾರ್ಯಾಚರಿಸುತ್ತಿವೆ. ಸದ್ಯ ಈ ಘಟಕಗಳಿಂದ ಕೇವಲ ನಾಲ್ಕು ಟನ್ ನಷ್ಟು ವೈದ್ಯಕೀಯ ಆಕ್ಸಿಜನ್ ಅನ್ನು ಮಂಗಳೂರಿನಲ್ಲಿ ಉತ್ಪಾಸಿದರೆ 8 ಟನ್ ಆಕ್ಸಿಜನ್ ಗಳಿಗೆ ಬೇಕಾದಷ್ಟು ಕಚ್ಚಾವಸ್ತು ವನ್ನು ಕೇರಳದಿಂದ ತಂದು ಉತ್ಪಾದಿಸಲಾಗುತ್ತದೆ.
ಆದರೆ ಇದೀಗ ವಾರಕ್ಕೊಮ್ಮೆ ಕೇರಳದ ಪಾಲಕ್ಕಡ್ ನಿಂದ ಬರುತ್ತಿದ್ದ ಕಚ್ಚಾವಸ್ತು ವ್ಯತ್ಯಯವಾಗಿದೆ. ಇನ್ನು ಬಳ್ಳಾರಿಯಿಂದ ಬರುತ್ತಿದ್ದ ಕಚ್ಚಾವಸ್ತುಗಳನ್ನು ನಿಯಮಿತವಾಗಿ ದ.ಕ. ಜಿಲ್ಲೆಗೆ ದೊರೆಯುವಂತೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಕೊವೀಡ್ ಸಾಂಕ್ರಮಿಕದ ಮುಂಚೆ ಜಿಲ್ಲೆಯಲ್ಲಿ ಪ್ರತಿ ದಿನ 6 ಟನ್ ಆಕ್ಸಿಜನ್ ವೈದ್ಯಕೀಯ ಬೇಡಿಕೆ ಇದ್ದು ಈ ನಡುವೆ ಅದು ಏಕಾಏಕಿ 12ಟನ್ ಗೆ ಏರಿಕೆಯಾಗಿರುವುದು ಗರ್ಮನಾರ್ಹ ಸಂಗತಿಯಾಗಿದೆ.