ಮಂಗಳೂರು, ಮೇ 01 (DaijiworldNews/MB) : ತಲಪಾಡಿ ಚೆಕ್ಪಾಯಿಂಟ್ ಬಳಿಯ ನಿಸರ್ಗ ಬಾರ್ & ರೆಸ್ಟೋರೆಂಟ್ನಲ್ಲಿ ಏಪ್ರಿಲ್ 30 ಶುಕ್ರವಾರ ಪೊಲೀಸರು ಮಧ್ಯಾಹ್ನ 2 ಗಂಟೆ ಸುಮಾರಿಗೆ ದಾಳಿ ನಡೆಸಿದ್ದು ಈ ಸಂದರ್ಭ ಯಾವುದೇ ಮಾನ್ಯ ಬಿಲ್ಗಳಿಲ್ಲದ 1.53 ಲಕ್ಷ ರೂ.ಗಳ 52 ಬಾಕ್ಸ್ಗಳ ಮದ್ಯವನ್ನು ಸಂಗ್ರಹಿಸಿಟ್ಟಿರುವುದು ತಿಳಿದು ಬಂದಿದೆ.
ಇನ್ನು ದಾಳಿಯ ವೇಳೆ ಬಾರ್ನ ಒಳಗೆ ಚರಣ್ (22) ಎಂದು ಗುರುತಿಸಲಾದ ಬಾರ್ನ ಕ್ಯಾಷಿಯರ್ ಇದ್ದು ಆತನನ್ನು ಪ್ರಶ್ನಿಸಿದಾಗ, ನಗರದ ಮತ್ತೊಂದು ವೈನ್ ಶಾಪ್ನಿಂದ ಮದ್ಯವನ್ನು ಖರೀದಿಸಲಾಗಿದೆ ಎಂದು ತಿಳಿಸಿದ್ದಾನೆ.
ಕಳೆದ ಮೂರು ತಿಂಗಳಿನಿಂದ ಈ ಬಾರ್ನಲ್ಲಿ ಮದ್ಯವನ್ನು ಸಂಗ್ರಹಿಸಿ ಕೇರಳದಂತಹ ನೆರೆಯ ರಾಜ್ಯಗಳಿಗೆ ಸಾಗಿಸಲಾಗುತ್ತಿದೆ ಎಂದು ಪೊಲೀಸರಿಗೆ ತಿಳಿದು ಬಂದಿದೆ.
ಇದಲ್ಲದೆ, ಬಾರ್ ರಾಜ್ಯ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದು, ನಿಗದಿತ ಸಮಯಕ್ಕಿಂತ ಅಧಿಕ ಕಾಲ ಮದ್ಯ ಮಾರಾಟ ನಡೆಸುತ್ತಿದ್ದವು. ಹಾಗೆಯೇ ಅನುಮತಿಗಿಂತ ಹೆಚ್ಚಿನ ಪ್ರಮಾಣದ ಮದ್ಯವನ್ನು ಸಂಗ್ರಹ ಹೊಂದಿದ್ದವು.
ಬಾರ್ನ ಪರವಾನಗಿಯನ್ನು ದಿವ್ಯಾ ರಾಜ್ ಶೆಟ್ಟಿ (38) ಎಂಬ ವ್ಯಕ್ತಿ ಹೊಂದಿದ್ದಾರೆ.
ಪ್ರಸ್ತುತ ಪೊಲೀಸರು ಚರಣ್ನನ್ನು ಬಂಧಿಸಿದ್ದು, ಬಾರ್ನ ವ್ಯವಸ್ಥಾಪಕರಾದ ದಿವ್ಯಾ ರಾಜ್ ಮತ್ತು ರೋಹಿತ್ ಬಂಧನಕ್ಕೆ ತಂಡವನ್ನು ನಿಯೋಜಿಸಿದ್ದಾರೆ.
ದಾಳಿಯಲ್ಲಿ, ಪೊಲೀಸರು ಬಾಸ್ ಬ್ಲ್ಯಾಕ್ & ಗೋಲ್ಡ್ ವಿಸ್ಕಿ (180 ಮಿಲಿ ಲೀಟರ್ನ 1,728 ಬಾಟಲಿಗಳು), ಬೆಜೋಯಿಸ್ ವಿಸ್ಕಿ (1 ಲೀಟರ್ನ 36 ಬಾಟಲಿಗಳು), ಡಿಎಸ್ಪಿ ಬ್ಲಾಕ್ (750 ಮಿಲಿ ಲೀಟರ್ನ 24 ಬಾಟಲಿಗಳು) ಹಾಗೂ ಬಾಸ್ ವಿಸ್ಕಿ (750 ಮಿಲಿ ಲೀಟರ್ನ 120 ಬಾಟಲಿಗಳು) ಯನ್ನು ವಶಕ್ಕೆ ಪಡೆದಿದ್ದಾರೆ.
ಅಬಕಾರಿ ಕಾಯ್ದೆಯ ಸೆಕ್ಷನ್ 32, 34, ಸಾಂಕ್ರಾಮಿಕ ಕಾಯ್ದೆಯ ಸೆಕ್ಷನ್ 5 ಮತ್ತು ಐಪಿಸಿಯ ಸೆಕ್ಷನ್ 188, 269 ರ ಅಡಿಯಲ್ಲಿ ಅಪರಾಧಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.