ಮೂಡುಬಿದಿರೆ, ಏ. 30 (DaijiworldNews/SM): ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮೂಡುಬಿದಿರೆ ಸಾವಿರಕಂಬ ಬಸದಿಗೆ ಭೇಟಿ ನೀಡಿ, ಮೂಡಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ಬಾಮೀಜಿ ಅವರ ಜೊತೆ ಕೋವಿಡ್ ಬಗ್ಗೆ ಸಮಾಲೋಚಿಸಿದರು.
ಮೂಡುಬಿದಿರೆ ಬಸದಿ ರಕ್ಷಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಪೊಲೀಸ್ ಅಯುಕ್ತರು ಮಾಹಿತಿ ಪಡೆದರು. ಕೊರೋನಾ ಕಾಲದಲ್ಲೂ ಶಾಂತಿ ಸುವ್ಯವಸ್ಥೆಯ ಪೊಲೀಸ್ ಇಲಾಖೆ ಹಾಗೂ ಸಮಸ್ತ ರಿಗೆ ಅರೋಗ್ಯ ಶಾಂತಿ ಪ್ರಾಪ್ತಿ ಯಾಗಲೆಂದು ಪ್ರಾರ್ಥಿಸಿದರು.
ಮೂಡುಬಿದಿರೆ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಬಿ.ಎಸ್ ಉಪಸ್ಥಿತರಿದ್ದರು.