ಕಾಸರಗೋಡು, ಏ 30(DaijiworldNews/MS): ರಿಯಲ್ ಎಸ್ಟೇಟ್ ಉದ್ಯಮಿ ಉಪ್ಪಳ ಮಣ್ಣಂಗುಯಿಯ ಅಬ್ದುಲ್ ಮುತ್ತಲೀಬ್ ( 38) ಕೊಲೆ ಪ್ರಕರಣದ ಎರಡನೇ ಆರೋಪಿಗೆ ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಕಠಿಣ ಜೀವಾವಧಿ ಸಜೆ ಹಾಗೂ ತಲಾ ಒಂದು ಲಕ್ಷ ರೂ . ದಂಡ ವಿಧಿಸಿ ತೀರ್ಫು ನೀಡಿದೆ.
ಉಪ್ಪಳದ ಸಂಶುದ್ದೀನ್ (31) ಶಿಕ್ಷೆಗೊಳಗಾದವರು. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕು. ಪ್ರಕರಣದ ಮೂರನೇ ಹಾಗೂ ನಾಲ್ಕನೇ ಆರೋಪಿಗಳ ವಿರುದ್ಧ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ಖುಲಾಸೆಗೊಳಿಸಿದೆ.ಉಪ್ಪಳ ಮುಳಿಂಜದ ಮುಹಮ್ಮದ್ ರಫೀಕ್ ಹಾಗೂ ಉಪ್ಪಳ ಕೊಡಿಬೈಲ್ ನ ಮನ್ಸೂರ್ ಅಹಮ್ಮದ್ ಖುಲಾಸೆಗೊಂಡವರು.
ಪ್ರಕರಣದ ಪ್ರಮುಖ ಆರೋಪಿ ಕಾಲಿಯಾ ರಫೀಕ್ ಈ ಹಿಂದೆ ಕೊಲೆಗೀಡಾಗಿದ್ದನು. 2013 ರ ಅಕ್ಟೋಬರ್ 24 ರಂದು ರಾತ್ರಿ ಕೃತ್ಯ ನಡೆದಿತ್ತು. ಮನೆ ಸಮೀಪ ಕಾರನ್ನು ತಡೆದ ಕಾಲಿಯಾ ರಫೀಕ್ ನೇತೃತ್ವದ ತಂಡವು ಕಾರಿಗೆ ಗುಂಡು ಹಾರಿಸಿ ಬಳಿಕ ಮಾರಕಾಯುಧಗಳಿಂದ ಕಡಿದು ಕೊಲೆಗೈದಿತ್ತು .ಪ್ರಕರಣಕ್ಕೆ ಸಂಬಂಧಪಟ್ಟನಂತೆ ಕಾಲಿಯಾ ರಫೀಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು.