ಕಾಸರಗೋಡು, ಎ.29 (DaijiworldNews/PY): "ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕೇರಳದಲ್ಲಿ ಎರಡು ವಾರಗಳ ಲಾಕ್ ಡೌನ್ ಅಗತ್ಯ" ಎಂದು ವೈದ್ಯರ ಸಂಘಟನೆಯಾದ ಕೆ.ಜಿ ಎಂ.ಓ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಸಾಂದರ್ಭಿಕ ಚಿತ್ರ
"ಕೇರಳ ವಿಧಾನಸಭಾ ಚುನಾವಣೆ ಬಳಿಕ ಸೋಂಕಿತರ ಪ್ರಮಾಣ ಪ್ರತಿದಿನ 25 ಸಾವಿರವನ್ನು ಮೀರಿದೆ. ಈಗಾಗಲೇ ಸೋಂಕು ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆರೋಗ್ಯ ವ್ಯವಸ್ಥೆಯೇ ಕುಸಿದು ಬೀಳಲಿದೆ" ಎಂದು ಅಭಿಪ್ರಾಯಪಟ್ಟಿದೆ.
ಕೇರಳದಲ್ಲಿ ಸದ್ಯ ಲಾಕ್ ಡೌನ್ ಜಾರಿಗೆ ತರುವುದಿಲ್ಲ ಎಂದು ಸರಕಾರ ತಿಳಿಸಿದ್ದು, ಆದರೆ ಲಾಕ್ ಡೌನ್ಗೆ ಬಿಗಿ ನಿಯಂತ್ರಣಗಳನ್ನು ಅನುಸರಿಸಲಾಗುತ್ತಿದೆ. ಆದರೂ ನಿಯಂತ್ರಣ ಕಟ್ಟುನಿಟ್ಟಾಗಿ ಜಾರಿಗೆ ಬಾರದಿರುವುದು, ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದು ಆರೋಗ್ಯ ವಲಯದ ಚಿಂತೆಗೀಡು ಮಾಡಿದೆ.