ಮಂಗಳೂರು, ಏ 29(DaijiworldNews/MS): ಹೆಚ್ಚುತ್ತಿರುವ ಕೊರೊನಾ ಸಾಂಕ್ರಮಿಕ ರೋಗದ ನಿಯಂತ್ರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ಮಾದರಿಯ ಕರ್ಪ್ಯೂ ಜಾರಿಯಲ್ಲಿದ್ದರೂ, ಮಂಗಳೂರಿನಿಂದ ಇತರ ರಾಜ್ಯಗಳಿಗೆ ತೆರಳುವ ವಿಮಾನ ಸೇವೆ ಮಾತ್ರ ಅಬಾಧಿತವಾಗಿ ನಡೆಯುತ್ತಿದೆ.
ಮುಂಬಯಿಗೆ 3 , ಬೆಂಗಳೂರಿನಿಂದ 2, ಹೈದರಬಾದ್ - ಚೆನ್ನೈಗೆ 3 ವಿಮಾನಗಳು ಪ್ರತಿ ನಿತ್ಯ ಸಂಚರಿಸುತ್ತಿವೆ. ಹೀಗಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಿದೆ.
ವಿಮಾನ ನಿಲ್ದಾಣಗಳಿಗೆ ಪ್ರಯಾಣಿಸುವವರು ವಿಮಾನಯಾನ ಟಿಕೆಟ್ ಪ್ರಯಾಣದ ಟಿಕೆಟ್ ಗಳನ್ನೇ ಪಾಸ್ ಗಳಂತೆ ಬಳಸಿಕೊಳ್ಳಲು ಅವಕಾಶವಿದೆ. ಆಟೋ, ಕ್ಯಾಬ್ , ಟ್ಯಾಕ್ಸಿಗಳ ಮೂಲಕ ಸಂಚರಿಸಬಹುದು. ವಿಮಾನ ನಿಲ್ದಾಣ, ವಿಮಾನಯಾನ ಸಾಂಸ್ಥೆಯ ಸರಕು , ಸೇವೆಗಳಿಗೆ ಈ ಕಾರಣಕ್ಕಾಗಿ ಅನುಮತಿ ನೀಡಲಾಗಿದೆ.