ಉಡುಪಿ, ಏ.28 (DaijiworldNews/MB) : ಖಾಸಗಿ ಬಸ್ನ ಚಾಲಕನೊಬ್ಬ ಲಾಕ್ಡೌನ್ನಿಂದ ಆದ ಶೋಚನೀಯ ಸ್ಥಿತಿಗತಿಗಳನ್ನು ತಿಳಿಸುವ ವಿಡಿಯೋ ವೈರಲ್ ಆಗಿದೆ. ಲಾಕ್ಡೌನ್ ಕಾರಣದಿಂದಾಗಿ ಸಾರಿಗೆ ವ್ಯವಸ್ಥೆಯು ಇಲ್ಲದ ಕಾರಣ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಚಾಲಕ ಬಿಜೆಪಿಗೆ ಎಂದಿಗೂ ಮತ ಹಾಕಲ್ಲ ಎಂದು ಚಾಲಕ ಪ್ರತಿಜ್ಞೆ ಮಾಡಿದ್ದಾರೆ.
"''ಇನ್ನು ಮುಂದೆ ಉದ್ಯೋಗವಿಲ್ಲ. ಇದರಿಂದಾಗಿ ದಿನಗೂಲಿ ಮಾಡಿ ಜೀವನ ದೂಡಬೇಕಾಗುತ್ತದೆ. ಯಡಿಯೂರಪ್ಪ ಸರ್ಕಾರ ನಮಗೆ ಯಾವುದೇ ರೀತಿಯ ಸಹಾಯ ಮಾಡಲಿಲ್ಲ. ಸರ್ಕಾರಿ ಉದ್ಯೋಗ ಹೊಂದಿರುವ ಜನರು ಚಿಂತಿಸಬೇಕಾಗಿಲ್ಲ, ಆದರೆ ನಮ್ಮಂತಹ ಜನರು ಉದ್ಯೋಗಕ್ಕಾಗಿ ಅಲೆದಾಡಬೇಕಾಗಿದೆ. ಈಗ ಬಸ್ಗಳು ರಸ್ತೆಗೆ ಇಳಿಯುವಂತಿಲ್ಲ. ಬಸ್ನಲ್ಲಿ ಚಾಲಕ, ನಿರ್ವಾಹಕರಾಗಿ ಕಾರ್ಯ ನಿರ್ವಹಿಸುವವರಿಗೂ ಹಸಿವು ಎನ್ನುವ ಕುಟುಂಬಗಳಿವೆ, ಅವರು ಈಗ ಎಲ್ಲಿಗೆ ಹೋಗಬೇಕು'' ಎಂದು ಪ್ರಶ್ನಿಸಿದ್ದಾರೆ.
"ರಾಜ್ಯದ ಬಿಜೆಪಿ ಸರ್ಕಾರ ಸಮರ್ಥವಾಗಿಲ್ಲ. ನಾನು ಇನ್ನು ಎಂದಿಗೂ ಈ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ" ಎಂದು ಕೂಡಾ ಅವರು ಹೇಳಿದ್ದಾರೆ.
ಮೂಲಗಳ ಪ್ರಕಾರ, ಚಾಲಕ ಕುಂದಾಪುರ ಮೂಲದ ಖಾಸಗಿ ಬಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ.
ಕೊರೊನಾ ಸೋಂಕಿನಿಂದಾಗಿ ಕಳೆದ ವರ್ಷ ಜಾರಿಗೆ ತಂದಿದ್ದ ಲಾಕ್ಡೌನ್ ಸಾರಿಗೆ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆ ಹೆಚ್ಚಿನ ಜನರು ಬಸ್ನಲ್ಲಿ ಬಾರದ ಕಾರಣ ಹಲವು ಸಿಬ್ಬಂದಿಗಳಿಗೆ ಕೆಲವು ಕಂಪನಿಗಳು ಪಾವತಿರಹಿತ ರಜೆ ನೀಡಿತ್ತು. ಹೆಚ್ಚುತ್ತಿರುವ ಇಂಧನ ಬೆಲೆ ಹಾಗೂ ರಾಜ್ಯ ಸರ್ಕಾರದ ಅಸಮರ್ಪಕ ಬೆಂಬಲ ಕೂಡ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಭಾರೀ ಹೊಡೆತ ನೀಡಿದೆ.